5 ಸಾವಿರ ಕೊಡಿ ಅಂತಾ ಬಂದು ಬೆತ್ತಲೆಯಾಗಿ ಹನಿಟ್ರ್ಯಾಪ್ ಮಾಡಿದ್ಳು!

Public TV
1 Min Read

ಮಂಗಳೂರು: ಯುವಕನೊಬ್ಬನನ್ನು ತಂಡವೊಂದು ಹನಿಟ್ರ್ಯಾಪ್ ಮಾಡಿ ದರೋಡೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ನಡೆದಿದೆ. ವಿಟ್ಲ ಸಮೀಪದ ಕುಡ್ತಮುಗೇರು ನಿವಾಸಿ ಮಹಮ್ಮದ್ ಹನೀಫ್ ಥಳಿತಕ್ಕೊಳಗಾಗಿ ದರೋಡೆಗೆ ಒಳಗಾದವನಾಗಿದ್ದು ವಿಟ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯುವತಿ ಸೇರಿ ಐವರನ್ನು ಬಂಧಿಸಿದ್ದಾರೆ.

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪರಿಚಯ ಆಗಿದ್ದ ಪಜ್ಜು ಅಲಿಯಾಸ್ ಸುಮೈಯ್ಯಾ ಎಂಬಾಕೆ ಕಳೆದ ಶನಿವಾರ ರಾತ್ರಿ ಮಹಮ್ಮದ್ ಬಳಿ 5 ಸಾವಿರ ರೂಪಾಯಿ ಬೇಕೆಂದು ಹೇಳಿ ಕುಡ್ತಮುಗೇರಿನ ಫ್ಲಾಟ್ ಗೆ ಆಗಮಿಸಿದ್ದಳು. ಆದರೆ ಇವರನ್ನು ಫಾಲೋ ಮಾಡಿಕೊಂಡು ಟವೇರಾದಲ್ಲಿ ಬಂದಿದ್ದ ಐವರ ತಂಡ ಯುವತಿಯನ್ನು ಮಹಮ್ಮದ್ ಜೊತೆ ಬೆತ್ತಲೆಯಾಗಿ ನಿಲ್ಲಿಸಿ ಫೋಟೊ ತೆಗೆದಿದ್ದಾರೆ. ಆನಂತರ 5 ಲಕ್ಷ ರೂ. ಕೊಡುವಂತೆ ಪೀಡಿಸಿದ್ದಲ್ಲದೆ ರಾತ್ರಿ 2 ಗಂಟೆಯವರೆಗೂ ಥಳಿಸಿದ್ದಾರೆ.

ಕೊನೆಗೆ ಮನೆಯ ಕಪಾಟು ಒಡೆದು 60 ಗ್ರಾಮ್ ಚಿನ್ನಾಭರಣ, 17 ಸಾವಿರ ರೂಪಾಯಿ ನಗದು ಹಾಗೂ ಮಹಮ್ಮದ್ ಬಳಸುತ್ತಿದ್ದ ಸ್ವಿಫ್ಟ್ ಕಾರನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ರೆ ಕೊಲ್ಲುವ ಬೆದರಿಕೆಯೊಡ್ಡಿ ತಂಡ ಅಲ್ಲಿಂದ ಪರಾರಿಯಾಗಿತ್ತು. ಆ ಬಳಿಕ ಮಹಮ್ಮದ್ ಸಂಬಂಧಿಕರಿಗೆ ವಿಷಯ ತಿಳಿಸಿದ್ದು ವಿಟ್ಲ ಪೊಲೀಸರಿಗೆ ದೂರು ನೀಡಿದ್ದಾರೆ. ಫೌಜಿಯಾ ಮತ್ತು ಐವರ ತಂಡ ಈ ಕೃತ್ಯ ಎಸಗಿದ್ದಾಗಿ ದೂರು ದಾಖಲಾಗಿದ್ದು ವಿಟ್ಲ ಠಾಣೆಯಲ್ಲಿ ಹನಿಟ್ರ್ಯಾಪ್ ಮತ್ತು ದರೋಡೆ ಪ್ರಕರಣ ದಾಖಲಾಗಿದೆ.

ಬಂಧಿತರು: ತೊಕ್ಕೊಟ್ಟು ಕೆಸಿ ರೋಡ್ ಕಾಲೋನಿ ನಿವಾಸಿ ಅಶ್ರಫ್ ಸಂಶೀರ್ (27), ಪರಂಗಿಪೇಟೆ ಅಮ್ಮೆಮ್ಮಾರ್ ನಿವಾಸಿ ಜೈನುದ್ದೀನ್, ತೊಕ್ಕೊಟ್ಟು ಉಳ್ಳಾಲ ಮಾರ್ಗತಳಿ ನಿವಾಸಿ ಮಹಮ್ಮದ್ ಇಕ್ಬಾಲ್ (27), ಉಳ್ಳಾಲ ಮುಕ್ಕಚ್ಚೇರಿ ನಿವಾಸಿ ಉಬೈದುಲ್ಲಾ (32) ಮತ್ತು ಸಕಲೇಶಪುರ ಅರೆಹಳ್ಳಿ ಸಂತೋಷ ನಗರ ನಿವಾಸಿ ಪಜ್ಜು ಯಾನೆ ಪರ್ಝಾನ ಅಲಿಯಾಸ್ ಸುಮೈಯ್ಯ (26) ಬಂಧಿತರು. ಇವರ ಕೈಯಲ್ಲಿದ್ದ ಪಾಸ್ ಪೋರ್ಟ್, 6 ಮೊಬೈಲ್, 2 ಕಾರು, 8 ಗ್ರಾಂ ಚಿನ್ನ, 7.50 ಲಕ್ಷ ರೂಪಾಯೊ ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.

 

Share This Article
Leave a Comment

Leave a Reply

Your email address will not be published. Required fields are marked *