ವಿಧಾನಸೌಧದ ವಜ್ರ ಮಹೋತ್ಸವ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಅಪರೂಪದ ಕ್ಷಣಗಳಿವು..!

Public TV
2 Min Read

ಬೆಂಗಳೂರು: ವಿಧಾನಸೌಧದ ವಜ್ರ ಮಹೋತ್ಸವದ ಪ್ರಯುಕ್ತ ವಿಧಾನಸಭೆ ಸಭಾಂಗಣದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಿದರು. ಕಾರ್ಯಕ್ರಮ ಮುಗಿದ ನಂತರ ವಿಧಾನಸೌಧದ ಮುಂಭಾಗ ಫೋಟೋ ಸೆಷನ್ ನಡೆಯಿತು. ವಜ್ರಮಹೋತ್ಸವ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಸಂಜೆ ವಿಧಾನಸೌಧದ ಮುಂಭಾಗ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಫೋಟೋ ಸೆಷನ್ ನಲ್ಲಿ ಕೂರಲು ವ್ಯವಸ್ಥೆ ಸಿಗಲಿಲ್ಲ ಎಂಬ ಎಚ್.ಡಿ.ಕೆ. ಆರೋಪ, ಟಿಪ್ಪುವನ್ನು ಹಾಡಿ ಹೊಗಳಿದ ರಾಷ್ಟ್ರಪತಿ ರಾಮನಾಥ ಕೋವಿಂದ್ ಭಾಷಣ ಕಾಂಗ್ರೆಸ್ ಶಾಸಕರು ಹಾಗೂ ನಾಯಕರ ಸಂಭ್ರಮಕ್ಕೆ ಕಾರಣವಾದರೆ, ಟಿಪ್ಪು ಜಯಂತಿ ಆಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದ ಬಿಜೆಪಿ ಮುಖಂಡರು ಕೋವಿಂದ್ ಭಾಷಣದಿಂದಾಗಿ ತೀವ್ರ ಮುಜುಗರಕ್ಕೀಡಾಗಬೇಕಾಯಿತು ಎನ್ನುವುದಂತೂ ಸುಳ್ಳಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ಬಿ.ಎಸ್.ಯಡಿಯೂರಪ್ಪ ರಾಷ್ಟ್ರಪತಿಗಳ ಭಾಷಣದಲ್ಲಿ ಟಿಪ್ಪುವಿನ ಉಲ್ಲೇಖಕ್ಕೆ ನೋ ಕಮೆಂಟ್ ಎಂದರು. ಬಿಜೆಪಿಯ ಇತರೆ ನಾಯಕರು ಇದಕ್ಕೆ ಆಕ್ಷೇಪವನ್ನೂ ವ್ಯಕ್ತಪಡಿಸಿದರು. ಆದರೆ ಸಂಸದ ಪ್ರತಾಪ್ ಸಿಂಹ ಮಾತ್ರ ಸಂಜೆ ರಾಷ್ಟ್ರಪತಿಗಳ ಅಧಿಕೃತ ಟ್ವಿಟ್ಟರ್ ಖಾತೆಗೆ ಟ್ವೀಟ್ ಟ್ಯಾಗ್ ಮಾಡಿ ಟಿಪ್ಪು ಏನು ಮಾಡಿದ್ದ ಎಂದು ಪ್ರಶ್ನಿಸಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಈ ಎಲ್ಲದರ ನಡುವೆ ರಾಜ್ಯದ ಇತಿಹಾಸದಲ್ಲಿ ಅವಿಸ್ಮರಣೀಯ ದಿನ ಎನ್ನಲಾದ ವಿಧಾನಸೌಧದ ವಜ್ರಮಹೋತ್ಸವ ಹೇಗಿತ್ತು ಎಂಬುದನ್ನು ಚಿತ್ರಗಳ ಮೂಲಕ ತೋರಿಸುವ ಪ್ರಯತ್ನ ನಮ್ಮದು. ಈ ವಜ್ರಮಹೋತ್ಸವ ನೆನಪು ಅಜರಾಮರವಾಗಿರಲಿ ಎಂದು ಕಾರ್ಯಕ್ರಮದ ಪ್ರಮುಖ ಫೋಟೋಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ.

President Ram Nath Kovind addressed the joint session during Diamond Jubilee Celebrations of Vidhana Soudha in Bengaluru on Wednesday. /KPN
President Ram Nath Kovind addressed the joint session during Diamond Jubilee Celebrations of Vidhana Soudha in Bengaluru on Wednesday.

President Ram Nath Kovind at a photo session during Diamond Jubilee Celebrations of Vidhana Soudha in Bengaluru on Wednesday.

 

 

Share This Article
Leave a Comment

Leave a Reply

Your email address will not be published. Required fields are marked *