ಚಿರತೆ ದಾಳಿಗೆ ಕುಟುಂಬ ನಿರ್ವಹಣೆಗಿದ್ದ ಕುರಿ, ಮೇಕೆ ಬಲಿ- ಗ್ರಾಮಸ್ಥ ಕಂಗಾಲು

Public TV
1 Min Read

ರಾಮನಗರ: ಚಿರತೆ ದಾಳಿಗೆ ಮೂರು ಕುರಿ ಮತ್ತು ಎರಡು ಮೇಕೆ ಬಲಿಯಾದ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೋಟಮಾರನಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಮಧು ಎಂಬವರಿಗೆ ಸೇರಿದ ಮೂರು ಕುರಿ ಹಾಗೂ ಎರಡು ಮೇಕೆಗಳನ್ನು ಭಾನುವಾರ ತಡರಾತ್ರಿ ಚಿರತೆ ದಾಳಿ ಮಾಡಿ ಕೊಂದು ಹಾಕಿದೆ. ಮಧು ಅವರು ತಮ್ಮ ಕುಟುಂಬದ ಜೀವನೋಪಾಯಕ್ಕಾಗಿ ಕುರಿ, ಮೇಕೆ ಸಾಕಾಣೆ ಮಾಡಿಕೊಂಡಿದ್ದರು. ಆದರೆ ಈಗ ಚಿರತೆ ದಾಳಿಯಿಂದ ಕುರಿ, ಮೇಕೆಯನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ.

ಗ್ರಾಮದಲ್ಲಿ ಪದೇ ಪದೇ ಚಿರತೆ ದಾಳಿ ನಡೆಯುತ್ತಿದ್ದರೂ ಅರಣ್ಯ ಅಧಿಕಾರಿಗಳು ತಲೆ ಕೆಡಸಿಕೊಂಡಿಲ್ಲ. ಈಗ ಮತ್ತೆ ಕುರಿ ಮೇಕೆಗಳ ಸಾವಾಗಿದ್ದರಿಂದ ಗ್ರಾಮಸ್ಥರು ಆಕ್ರೋಶದಿಂದ ಚಿರತೆ ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *