ಕೇಂದ್ರ, ರಾಜ್ಯ ಸರ್ಕಾರಗಳಿಗೆ ಗಂಗಾ ನದಿ ಸ್ಪಚ್ಛತೆಯ ವರದಿ ಕೇಳಿದ ಎನ್‍ಜಿಟಿ

Public TV
2 Min Read

ನವದೆಹಲಿ: ಮೋದಿ ನೇತೃತ್ವದ ಕೇಂದ್ರ ಹಾಗೂ ಉತ್ತರ ಪ್ರದೇಶ ಯೋಗಿ ಸರ್ಕಾರವನ್ನು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಪೀಠವು ಗಂಗಾ ನದಿ ಸ್ಪಚ್ಛತೆಯನ್ನು ಮಾಡಲು ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿಯನ್ನು ಕೇಳಿದೆ.

ಈ ಹಿಂದೆ ಎನ್‍ಜಿಟಿ ಕೇಂದ್ರಕ್ಕೆ ಗಂಗಾ ನದಿಯ ಗೋಮುಖ ದಿಂದ ಉನ್ನೋ ಪ್ರದೇಶದ ಸ್ಪಚ್ಛತ ಕಾರ್ಯವನ್ನು ಕೈಗೊಳ್ಳಲು ಸೂಚನೆಯನ್ನು ನೀಡಿತ್ತು. ಗಂಗಾ ನದಿಯ ಹರಿಯುವ ಪ್ರದೇಶದ ಸುತ್ತಲಿನ 100 ಮೀ ಅಂತರವನ್ನು ಹಸಿರು ಪೀಠವು `ನೋ ಡೆವಲಪ್‍ಮೆಂಟ್ ಜೋನ್’ ಎಂದು ಘೋಷಣೆ ಮಾಡಿತ್ತು. ಅಲ್ಲದೇ ನದಿಯ ದಡಗಳಲ್ಲಿ 500 ಮೀ ಒಳಗೆ ಯಾವುದೇ ರೀತಿಯ ಕಸವನ್ನು ಎಸೆದಂತೆ ಸೂಚನೆಯನ್ನು ನೀಡಿತ್ತು.

ಎನ್‍ಜಿಟಿಯ ನ್ಯಾಯಪೀಠದ ಅಧ್ಯಕ್ಷ ನ್ಯಾ. ಸ್ವತಂತರ್ ಕುಮಾರ್ ಗಂಗಾ ನದಿಯ ಉತ್ತರ ಪ್ರದೇಶದಿಂದ ಕಾನ್ಪುರ ವರೆಗಿನ ಫೇಸ್-2 ಸ್ಪಚ್ಛತಾ ಯೋಜನೆ ಆರಂಭಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿಯನ್ನು ನೀಡಿವಂತೆ ತಿಳಿಸಿದ್ದಾರೆ.

ಗಂಗಾ ನದಿ ಸ್ಪಚ್ಛತೆಯ ಕುರಿತು ನ್ಯಾಯಧೀಕರಣ ನೀಡಿರುವ ಸೂಚನೆಗಳ ಮೇಲೆ ಆರಂಭಿಸಲಾಗಿರುವ ಯೋಜನೆಗಳು ಪೂರ್ಣಗೊಂಡಿಲ್ಲ. ಈ ಕುರಿತ ವರದಿಗಳನ್ನು ಉತ್ತರಾಖಂಡ ಹಾಗೂ ಉತ್ತರ ಪ್ರದೇಶ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ನೀಡಬೇಕು ಎಂದು ನ್ಯಾಯ ಪೀಠ ಸೂಚಿಸಿದೆ.

ಅಲ್ಲದೇ ನ್ಯಾಯಧಿಕರಣದ ನೀಡಿರುವ ನಿರ್ದೇಶಗಳ ಪ್ರತಿಯನ್ನು ಕೇಂದ್ರದ ಗಂಗಾ ನದಿಯ ಸ್ಪಚ್ಛತಾ ಸಮಿತಿಯ ಕಾರ್ಯದರ್ಶಿ ಹಾಗೂ ರಾಜ್ಯ ಸರ್ಕಾರದ ಜಲ ಸಂಪನ್ಮೂಲ ಸಚಿವಾಲಯ ಹಾಗೂ ಪರಿಸರ ಸಚಿವಾಲಯ, ಅರಣ್ಯ ಮತ್ತು ಹವಾಮಾನ ಇಲಾಖೆಗೆ ಈ ನಿರ್ದೇಶನಗಳನ್ನು ಕಳುಹಿಸಿಕೊಡಬೇಕು ಎಂದು ಪೀಠವು ಆದೇಶಿಸಿದೆ.

ಅಕ್ಟೋಬರ್ 24 ರಂದು ಗಂಗಾ ನದಿ ಸ್ಪಚ್ಛತೆಯ ಕುರಿತು ನಡೆಯುವ ಮುಂದಿನ ವಿಚಾರಣೆಯ ಒಳಗೆ ಮಾಹಿತಿಯನ್ನು ನೀಡಬೇಕು ಎಂದು ಸೂಚಿಸಿದೆ.

ನ್ಯಾಯ ಪೀಠವು ಈ ಹಿಂದೆ ನಡೆಸಿದ ವಿಚಾರಣೆ ಸಂದರ್ಭದಲ್ಲಿ ಸರ್ಕಾರವು ಸುಮಾರು 7 ಸಾವಿರ ಕೋಟಿ ರೂ.ಗಳನ್ನು ಎರಡು ವರ್ಷಗಲ್ಲಿ ಗಂಗಾ ನದಿಯ ಸ್ಪಚ್ಚತೆಗೆ ಖರ್ಚು ಮಾಡಿದ್ದಾಗಿ ಮಾಹಿತಿಯನ್ನು ನೀಡಿತ್ತು. ಆದರೆ ಇಂದಿಗೂ ಗಂಗಾ ನದಿಯ ದಡಗಳಲ್ಲಿ ಸ್ವಚ್ಛತೆ ಕಾಣುತ್ತಿಲ್ಲ.

ನ್ಯಾಯ ಪೀಠವು ನೀಡುವ 543 ಪುಟಗಳ ಆದೇಶ ಪ್ರತಿಯಲ್ಲಿ ಉತ್ತರ ಪ್ರದೇಶದ ಹರಿದ್ವಾರ ದಿಂದ ಉನ್ನೋ ಪ್ರದೇಶದ ನದಿ ದಡಗಳ 100 ಮೀ ಪ್ರದೇಶದಲ್ಲಿ ಯಾವುದೇ ವಾಣಿಜ್ಯ ಹಾಗೂ ವಸತಿ ಕಟ್ಟಡಗಳನ್ನು ನಿರ್ಮಿಸದಂತೆ ನಿರ್ಬಂಧವನ್ನು ವಿಧಿಸಿದೆ. ಅಲ್ಲದೆ ನದಿಗೆ ಯಾವುದೇ ರೀತಿಯ ಕಟ್ಟಡ ತ್ಯಾಜ್ಯ, ಇ-ತ್ಯಾಜ್ಯ ಅಥವಾ ಜೈವಿಕ ವೈದ್ಯಕೀಯ ತ್ಯಾಜ್ಯಗಳನ್ನು ತಂದು ಸುರಿಯದಂತೆ ಸೂಚನೆಯನ್ನು ನೀಡಿದೆ.

ಗಂಗಾ ನದಿಯಲ್ಲಿ ಯಂತ್ರಗಳ ಸಹಾಯ ಮಾಡುವ ಗಣಿಗಾರಿಕೆಯನ್ನು ನಿಷೇಧಿಸಿ ಆದೇಶವನ್ನು ನೀಡಿತ್ತು.

Share This Article
Leave a Comment

Leave a Reply

Your email address will not be published. Required fields are marked *