ಭಾಷಣದುದ್ದಕ್ಕೂ ಜೆಡಿಎಸ್ ಶಾಸಕ ತಿಮ್ಮರಾಯಪ್ಪರಿಗೆ ಕಾಮಿಡಿ ಪಂಚ್ ಕೊಟ್ಟ ಸಿಎಂ

Public TV
1 Min Read

ತುಮಕೂರು: ಪಾವಗಡದ ತಿರುಮಣಿ ಸೋಲಾರ್ ಪಾರ್ಕ್ ವೀಕ್ಷಣೆ ಸಂದರ್ಭದ ಕಾರ್ಯಕ್ರಮದಲ್ಲಿ ತಮ್ಮ ಭಾಷಣದುದ್ದಕ್ಕೂ ಸಿಎಂ ಸಿದ್ದರಾಮಯ್ಯ ಅವರು ಜೆಡಿಎಸ್ ಶಾಸಕ ತಿಮ್ಮರಾಯಪ್ಪರನ್ನು ಕಿಚಾಯಿಸಿದ್ದಾರೆ.

ಪದೇ ಪದೇ ತಿಮ್ಮರಾಯಪ್ಪರ ಹೆಸರನ್ನು ಪ್ರಸ್ತಾಪಿಸಿ ಕಾಮಿಡಿ ಪಂಚ್ ನೀಡಿದ್ದಾರೆ. ತುಂಗಭದ್ರಾ ನೀದಿಯ ಯೋಜನೆ ಕುರಿತಂತೆ ಪ್ರಸ್ತಾಪಿಸಿದ ಸಿಎಂ ಏ ತಿಮ್ಮರಾಯಪ್ಪ ತುಂಗಭದ್ರಾ ಯೋಜನೆ ನಮ್ಮ ಸರ್ಕಾರದ್ದು, ನಿಮ್ದು ಅಂತಾ ಹೇಳ್ಕೊಬೇಡ ಎಂದು ತಮಾಷೆಯಾಗಿಯೇ ಟಾಂಗ್ ನೀಡಿದರು.

ಐದು ತಾಲೂಕಿಗೂ ಎಂಎಲ್‍ಎ ನಾ ನೀವು ಎಂದು ತಮಾಷೆಯಾಗಿ ಪಂಚ್ ನೀಡಿದರು. ಭಾಷಣದುದ್ದಕ್ಕೂ ತಿಮ್ಮರಾಯಪ್ಪರ ಹೆಸರು ತಮಾಷೆಯಾಗಿ ಸಿಎಂ ಬಳಸುತ್ತಿದ್ದರಿಂದ ಸಭೆಗೆ ಸೇರಿದವರೆಲ್ಲ ಶಿಳ್ಳೆ ಚಪ್ಪಾಳೆ ಹಾಕುತ್ತಿದ್ದರು.

Share This Article
Leave a Comment

Leave a Reply

Your email address will not be published. Required fields are marked *