ಶಿವಮೊಗ್ಗ: ತುಂಗಾ ಕಾಲುವೆಯಲ್ಲಿ ಮುಳುಗಿತ್ತಿದ್ದ ಬಾಲಕನನ್ನು ರಕ್ಷಿಸಿದ ದ ಸೇವಾಲಾಲ್ ನಗರದ ಸಿದ್ದಲಿಂಗೇಶ್ವರ ಶಾಲೆಯ ಕೃಷ್ಣನಾಯ್ಕ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ.
ನಗರದ ಹೊರ ವಲಯದ ನವುಲೆ ಸಮೀಪದ ತ್ರಿಮೂರ್ತಿನಗರದ ತುಂಗಾ ಕಾಲುವೆ ಬಳಿ ಐದನೇ ತರಗತಿಯ ದರ್ಶನ್ ಮತ್ತು ಅನೀಷ್ ಆಟವಾಡುತ್ತಿದ್ದರು. ಅಲ್ಲೇ ಬಿದ್ದಿದ್ದ ಟಿವಿ ಪ್ಯಾಕಿಂಗ್ನ ಬೆಂಡು ಹಿಡಿದು ನೀರಿನಲ್ಲಿ ತೇಲಲು ಮುಂದಾಗಿದ್ದಾರೆ. ಈ ವೇಳೆ ಇಬ್ಬರೂ ಮುಳುಗ ತೊಡಗಿದ್ದಾರೆ.
ಇದೇ ವೇಳೆ ಸ್ಥಳಾಕ್ಕಾಗಮಿಸಿದ 7ನೇ ತರಗತಿ ಕೃಷ್ಣ ಜೀವದ ಹಂಗು ತೊರೆದು ಕಾಲುವೆಗೆ ಧುಮುಕಿದ್ದಾನೆ. ಕೃಷ್ಣಾ ಇಬ್ಬರನ್ನೂ ಮೇಲೆತೆರಲು ಯತ್ನಿಸಿದ್ದಾನೆ. ದರ್ಶನ್ನನ್ನು ದಡ ಮುಟ್ಟಿಸಿದ ಕೃಷ್ಣನಾಯ್ಕ ಮತ್ತೆ ಅನೀಷ್ಗಾಗಿ ಹುಡುಕಿದರೂ ಪತ್ತೆಯಾಗಿಲ್ಲ. ಅಪಘಾತವಾದಗ ಸಹಾಯ ಹಸ್ತ ನೀಡುವ ಬದಲು ಮೊಬೈಲ್ನಲ್ಲಿ ಚಿತ್ರೀಕರಿಸುವ ಮನೋಭಾವದವರೇ ಹೆಚ್ಚು. ಆದರೆ ಕೃಷ್ಣನಾಯ್ಕ ಒಬ್ಬನ ಪ್ರಾಣ ಉಳಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.