ಶೌಚಾಯಲ ಇಲ್ಲದಕ್ಕೆ ಕಾಲೇಜು ಬಿಡಲು ಸಿದ್ಧರಿರುವ ವಿದ್ಯಾರ್ಥಿಗಳಿಗೆ ಬೇಕಿದೆ ಸಹಾಯ

Public TV
2 Min Read

ಬೀದರ್: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಶೌಚಾಲಯದ ವ್ಯವಸೈ ಇಲ್ಲದೆ ಪರದಾಡುತ್ತಿದ್ದಾರೆ. ಶಾಲಾ-ಕಾಲೇಜಿನಲ್ಲಿ ಕಡ್ಡಾಯವಾಗಿ ಶೌಚಾಲಯ ಇರಬೇಕು ಎಂಬ ನಿಯಮವಿದ್ದರೂ ಇಲ್ಲಿನ ಶಿಕ್ಷಣ ಇಲಾಖೆ ಮಾತ್ರ ಅದನ್ನು ಗಾಳಿಗೆ ತೂರಿದೆ. ಬೆಳಕು ಕಾರ್ಯಕ್ರಮದ ಮೂಲಕವಾದರೂ ಸಂಕಷ್ಟದ ಪರಿಸ್ಥಿತಿಗೆ ಪರಿಹಾರ ಸಿಗುತ್ತದೆ ಎಂದು ಭರವಸೆ ಇಟ್ಟುಕೊಂಡು ನೊಂದ ವಿದ್ಯಾರ್ಥಿನಿಯರು ಬಂದಿದ್ದಾರೆ.

ಜಿಲ್ಲೆಯ ನೌಬಾದ್‍ನಲ್ಲಿರುವ ಸರ್ಕಾರಿ ಕಾಜೇಜಿನಲ್ಲಿ ಸುಮಾರು 1,442 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈ ಕಾಲೇಜಿನಲ್ಲಿ ಶೌಚಾಲಯವಿಲ್ಲದೆ ವಿದ್ಯಾರ್ಥಿನಿಯರು ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ಹೋಗುವ ಹಂತಕ್ಕೆ ಬಂದಿದ್ದಾರೆ. ಹಲವು ವರ್ಷಗಳಿಂದ ಕಾಲೇಜಿಗೆ ಮೂಲಭೂತ ಸೌಕರ್ಯ ಒದಗಿಸಿ ಎಂದು ಹಲವು ಬಾರಿ ವಿದ್ಯಾರ್ಥಿಗಳು ಹೋರಾಟ ಮಾಡುತ್ತಿದ್ದಾರೆ. ಆದರೂ ಇದುವರೆಗೂ ಯಾವ ಪ್ರಯೋಜನವೂ ಕೂಡ ಆಗಿಲ್ಲ.

ಕಾಲೇಜಿನಲ್ಲಿ ಹಳೆಯ ಶೌಚಾಲಯವಿದೆ. ಅದು ಪಾಳು ಬಿದ್ದಿದ್ದೆ. ಅದರಿಂದ ಬಯಲು ಜಾಗವೇ ನಮಗೆ ಶೌಚಾಲಯವಾಗಿದೆ. ಕಾಲೇಜಿನಲ್ಲಿ 1,442 ವಿದ್ಯಾರ್ಥಿಗಳ ಪೈಕಿ ಶೇಕಡ 60ರಷ್ಟು ವಿದ್ಯಾರ್ಥಿನಿಯರೇ ಓದುತ್ತಿದ್ದಾರೆ. ಇಂದು ನಾವೆಲ್ಲಾ ಬಯಲಲ್ಲಿ ಶೌಚಾಲಯ ಮಾಡಬೇಕಾಗಿದ್ದು, ಇದರಿಂದ ಅವಮಾನವನ್ನು ಎದುರಿಸುತ್ತಿದ್ದೇವೆ. ಶೌಚಾಲಯವಿಲ್ಲದೆ ತತ್ತರಿಸಿ ಹೋಗಿರುವ ವಿದ್ಯಾರ್ಥಿಗಳಿಗೆ ಶೌಚಾಲಯ ಕಟ್ಟಿಸಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿಕೊಂಡು ಸಾಕಾಗಿ ಹೋಗಿದ್ದೇವೆ. ಹಲವು ವರ್ಷಗಳಿಂದ ಮೂಲಭೂತ ಸೌಕರ್ಯಕ್ಕಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಯಾವುದೇ ರೀತಿಯ ಪ್ರಯೋಜನ ಆಗಿಲ್ಲ ಆದ್ದರಿಂದ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಪದವಿ ವಿದ್ಯಾರ್ಥಿ ಮಾಹಾನಂದ ಹೇಳಿದ್ದಾರೆ.

ಶೌಚಾಲಯವಿಲ್ಲದೆ ವಿದ್ಯಾರ್ಥಿಗಳು ರೋಸಿ ಹೋಗಿದ್ರೆ ಮೊತ್ತೊಂದು ಕಡೆ ಕಾಲೇಜಿನ 50 ಅಥಿತಿ ಉಪನ್ಯಾಸಕರು, 32 ಖಾಯಂ ಉಪನ್ಯಾಶಕರು ಕಾರ್ಯನಿರ್ವಹಿಸುತ್ತಿದ್ದು ಅವರಿಗೂ ಸಹ ಶೌಚಾಲಯವಿಲ್ಲದೆ ರೋಸಿ ಹೋಗಿದ್ದಾರೆ. ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಶೌಚಾಲಯ ಕಡ್ಡಾಯವಾಗಿರುಬೇಕು ಎಂಬ ನಿಯಮವನ್ನು ಇಲ್ಲಿ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಗಾಳಿಗೆ ತೂರಿವೆ. ಉನ್ನತ ಶಿಕ್ಷಣ ಸಚಿವರೆ ಗಡಿ ಜಿಲ್ಲೆಯ ಪದವಿ ಕಾಲೇಜಿನ ಅವಮಾನವಿಯ ಪರಿಸ್ಥತಿಯನ್ನು ಒಮ್ಮೆ ನೋಡಿ. ಮೊದಲೆ ಗಡಿ ಭಾಗದಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳು ಇಲ್ಲದೆ ಮುಚ್ಚುತ್ತಿವೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘಟನೆಯ ಕಾರ್ಯಕರ್ತರು ಹೋರಾಟಗಳನ್ನು ಮಾಡಿದರು ಯಾವ ಒಬ್ಬ ಅಧಿಕಾರಿಗಳು ಕ್ಯಾರೆ ಎನ್ನದೆ ಇರುವುದು ವಿದ್ಯಾರ್ಥಿಗಳಿಗೆ ಅಧಿಕಾರಿಗಳು ಮಾಡುತ್ತಿರುವ ಬಹು ದೊಡ್ಡ ದ್ರೋಹವಾಗಿದೆ ಎಂದು ವಿಭಾಗೀಯ ಸಂಚಾಲಕ ರೇವಣಸಿದ್ದಾ ಹೇಳಿದರು.

ರಾಜ್ಯ ಸರ್ಕಾರ, ಉನ್ನತ ಶಿಕ್ಷಣ ಸಚಿವರು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಆದಷ್ಟು ಬೇಗ ವಿದ್ಯಾರ್ಥಿನಿಯರಿಗೆ ಕಾಲೇಜು ಆವರಣದಲ್ಲಿ ಎರಡು ಶೌಚಾಲಯವನ್ನು ಕಟ್ಟಿಸಿ ಬಡ ವಿದ್ಯಾರ್ಥಿಗಳು ಕಾಲೇಜು ಬಿಟ್ಟು ಹೋಗದಂತೆ ಮಾಡಬೇಕಾಗಿ ವಿನಂತಿ.

Share This Article
Leave a Comment

Leave a Reply

Your email address will not be published. Required fields are marked *