ಮೈಸೂರು ವಿಶ್ವವಿದ್ಯಾಲಯಕ್ಕೆ ಮಹಿಷಾಸುರನ ಹೆಸರಿಡಬೇಕು- ಪ್ರಾಧ್ಯಾಪಕರ ಒತ್ತಾಯ

Public TV
1 Min Read

ಮೈಸೂರು: ಮೈಸೂರು ವಿಶ್ವವಿದ್ಯಾಲಯಕ್ಕೆ ಮಹಿಷಾಸುರನ ಹೆಸರು ಇಡಬೇಕು. ಮಹಿಷಾಸುರನ ಹೆಸರನ್ನು ಅಜರಾಮರವಾಗಿಸಲು ಮೈಸೂರು ವಿವಿಗೆ ಮರುನಾಮಕರಣ ಮಾಡಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಮಹೇಶ್ಚಂದ್ರಗುರು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ನಗರದ ಬೆಂಗಳೂರು-ಮೈಸೂರು ಹೆದ್ದಾರಿಯ ಕೊಲಂಬಿಯಾ ಏಷಿಯಾ ಆಸ್ಪತ್ರೆ ಸಮೀಪದ ವೃತ್ತದಲ್ಲಿ ಮಹಿಷಾಸುರನ ಬೃಹತ್ ಪ್ರತಿಮೆ ನಿರ್ಮಿಸಬೇಕು. ರಾಜ್ಯ ಸರ್ಕಾರ ಮಹಿಷ ಹಬ್ಬಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂದು ಮಹೇಶ್ಚಂದ್ರಗುರು ಆಗ್ರಹಿಸಿದರು.

ಇಂದು ದಲಿತ ಸಂಘಟನೆಗಳು, ಪ್ರಗತಿಪರ ಒಕ್ಕೂಟ ಮೈಸೂರಿನಲ್ಲಿ ಮಹಿಷಾ ದಸರಾ ಮೆರವಣಿಗೆಯನ್ನು ಆಯೋಜನೆ ಮಾಡಿತ್ತು. ಬೆಳ್ಳಿ ರಥದಲ್ಲಿ ಮಹಿಷಾಸುರನ ಭಾವಚಿತ್ರವಿಟ್ಟು ಮೈಸೂರಿನ ಪುರಭವನದಿಂದ ಚಾಮುಂಡಿಬೆಟ್ಟದ ಮೇಲಿನ ಮಹಿಷಾಸುರನ ಪ್ರತಿಮೆವರೆಗೂ ಮೆರವಣಿಗೆ ಮಾಡಲಾಯಿತು. ಚಾಮುಂಡಿ ದಸರಾಕ್ಕಿಂತಾ ಮಹಿಷಾ ದಸರಾ ಮುಖ್ಯ ಎಂದು ಸಾರುವ ಉದ್ದೇಶದಿಂದ ಈ ಮೆರವಣಿಗೆಯನ್ನು ಕೈಗೊಳ್ಳಲಾಗಿದೆ. ಸಾಹಿತಿ ಕೆ.ಎಸ್. ಭಗವಾನ್, ಮಹೇಶ್ಚಂದ್ರಗುರು ಸೇರಿ ಹಲವರು ಭಾಗಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *