ಕಿವುಡ, ಮೂಕ ಮಕ್ಕಳನ್ನು 3 ಗಂಟೆ ಕಾಯಿಸಿ ಕೊನೆಗೆ ಕಾರ್ಯಕ್ರಮ ರದ್ದು ಮಾಡಿದ್ರು ಅನಂತಕುಮಾರ್ ಹೆಗಡೆ

Public TV
1 Min Read

ಧಾರವಾಡ: ಪ್ರಧಾನಿ ಮೋದಿ ಅವರ ಹುಟ್ಟುಹಬ್ಬದ ದಿನಾಚರಣೆ ಹಿನ್ನೆಲೆಯಲ್ಲಿ ಕಿವುಡ ಮತ್ತು ಮೂಕ ಮಕ್ಕಳ ಸಂಸ್ಥೆಗೆ ಭೇಟಿ ನೀಡಬೇಕಿದ್ದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಭೇಟಿ ನೀಡದೇ ಮಕ್ಕಳನ್ನು 3 ತಾಸು ಕಾಯಿಸಿ ಕೊನೆಗೆ ಕಾರ್ಯಕ್ರಮ ರದ್ದುಮಾಡಿದ್ದಾರೆ.

ಭಾನುವಾರ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಹನುಮಂತ ಕೊಟಬಾಗಿ ಕೇಂದ್ರ ಸಚಿವರ ಕಾರ್ಯಕ್ರಮವನ್ನು ನಿಗಧಿ ಮಾಡಿದ್ದರು. ಹೀಗಾಗಿ ಮಕ್ಕಳು ಮತ್ತು ಸಂಸ್ಥೆಯ ಅಧಿಕಾರಿಗಳು ಸಕಲ ಸಿದ್ಧತೆಗಳ ನ್ನು ಮಾಡಿಕೊಂಡಿದ್ದರು. ಈ ಸಂಬಂಧ ಸಚಿವರು ವಾಟ್ಸಪ್ ಮಾಡಿ ಭೇಟಿ ನೀಡುವುದಾಗಿ ಹನುಮಂತ ಅವರಿಗೆ ತಿಳಿಸಿದ್ದರು.

ಇನ್ನೂ ಮಾತಿನಂತೆ ವಿಕಲಚೇತನ ಮಕ್ಕಳನ್ನು ಭೇಟಿಯಾಗಲು ಬರದೇ ಸಚಿವರು ನೇರವಾಗಿ ಹುಬ್ಬಳ್ಳಿಯಿಂದ ಬೆಳಗಾವಿಗೆ ತೆರಳಿದ್ದಾರೆ. ನಾವು ಬೆಳಗ್ಗೆ 7 ಗಂಟೆಯಿಂದ ಸಚಿವರಿಗಾಗಿ ಕಾದಿದ್ದೇವೆ. ನನಗೆ 85 ವರ್ಷ ಆಗಿದ್ದು, ಸಚಿವರು ನಮ್ಮ ಸಂಸ್ಥೆಗೆ ಬರ್ತಾರೆ ಎಂದು ನಾನು ಸಹ ಬೆಳಗ್ಗೆಯೇ ಬಂದಿದ್ದೇನೆ. ಆದರೆ ಏನು ಮಾಡಕಾಗುತ್ತದೆ ಎಂದು ಕಿವುಡ ಮಕ್ಕಳ ಶಾಲೆಯ ಸಂಸ್ಥೆ ಅಧ್ಯಕ್ಷ ಮೇಗೂರು ತಮ್ಮ ಅಸಮಧಾನವನ್ನು ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *