ಭುವನೇಶ್ವರ್ ಡೇಟಿಂಗ್ ಸುದ್ದಿ ಕೇಳಿದ ತಂದೆ ಹೇಳಿದ್ದು ಹೀಗೆ!

Public TV
2 Min Read

ಮೀರತ್: ಶ್ರೀಲಂಕಾದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಕೊನೆಯ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಅತ್ಯುತ್ತಮ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಅವರ ಕುಟುಂಬ ತುಂಬಾ ಸಂತೋಷದಲ್ಲಿದೆ. ಈ ಸಂತೋಷದ ಸಂದರ್ಭದಲ್ಲಿ ಭುವಿ ಅವರ ತಂದೆ ಕಿರಣ್ ಪಾಲ್ ಸಿಂಗ್ ತಮ್ಮ ಮಗನ ಮದುವೆಯ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.

ಭುವಿ ಕ್ರಿಕೆಟ್ ಮೈದಾನದಲ್ಲಿ ತಮ್ಮನ್ನು ತಾವು ಸಾಬಿತು ಮಾಡಿಕೊಳ್ಳುತ್ತಿದ್ದಾರೆ. ತಾಯಿ ಇಂದ್ರೇಶ್ ನಿಂದ ತಂಗಿ ರೇಖಾವರೆಗೆ ಭುವಿ ಮದುವೆಗೆ ಕಾಯುತ್ತಿದ್ದಾರೆ. ಆದರೆ ಟೀಂ ಇಂಡಿಯಾದ ಬ್ಯುಸಿ ಶೆಡ್ಯೂಲ್ ನ ಕಾರಣ ಈ ವರ್ಷ ಮದುವೆ ಆಗುವುದು ಕಷ್ಟವೆಂದು ಉತ್ತರ ಪ್ರದೇಶದಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿರುವ ಕಿರಣ್ ಪಾಲ್ ಸಿಂಗ್ ತಿಳಿಸಿದ್ದಾರೆ.

27 ವರ್ಷದ ಭುವನೇಶ್ವರ್ ನ ಮದುವೆ ಯಾರೊಂದಿಗೆ ಆಗುತ್ತದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಕಿರಣ್ ಪಾಲ್ ಸಿಂಗ್ ಈ ವಿಷಯಕ್ಕೆ ಸಂಬಂಧಪಟ್ಟಂತೆ ನಾವು ನಮ್ಮ ಮಗನ ಮೇಲೆ ಯಾವುದೇ ಒತ್ತಡ ಹಾಕುವುದಿಲ್ಲ. ಅವನು ಇಷ್ಟಪಡುವ ಹುಡುಗಿ ಜೊತೆ ಮದುವೆ ಆಗುವ ಸ್ವಾತಂತ್ರ್ಯ ಅವನಿಗಿದೆ ಎಂದು ಉತ್ತರಿಸಿದರು.

ಇದನ್ನೂ ಓದಿ: ಭುವನೇಶ್ವರ್ ತಮ್ಮ ಡೇಟಿಂಗ್ ಸುದ್ದಿ ಬಗ್ಗೆ ಟ್ವಿಟರ್ ನಲ್ಲಿ ಹೀಗೆ ಬರೆದುಕೊಂಡಿದ್ರು..

ಮಾಧ್ಯಮಗಳಲ್ಲಿ ಮಗನ ಅಪೇರ್ ಬಗ್ಗೆ ಸಾಕಷ್ಟು ಕೇಳಿದ್ದೇನೆ. ನಾನು ಭುವಿಯೊಂದಿಗೆ ಮಾತನಾಡಿದ್ದೇನೆ. ಅವನು ಯಾವುದೇ ಹುಡುಗಿಯ ಬಗ್ಗೆ ನನ್ನ ಜೊತೆ ಮಾತನಾಡಿಲ್ಲ. ನಮ್ಮ ಮನೆಯ ಸದಸ್ಯರೆಲ್ಲ ಸ್ಟ್ರೇಟ್ ಫಾರ್ವಡ್ ನಿಲುವು ಹೊಂದಿದ್ದು, ಯಾವುದಾದರೂ ವಿಷಯ ಇದ್ದರೆ ಭುವಿ ನಮ್ಮ ಹತ್ತಿರ ಹೇಳುತ್ತಾನೆ. ಸದ್ಯಕ್ಕೆ ಭುವಿಗೆ ಮದುವೆಯ ಯಾವುದೇ ಯೋಚನೆ ಇಲ್ಲ. ಮಗನ ಖುಷಿಯೇ ನಮ್ಮ ಖುಷಿ ಎಂದು ಕಿರಣ್ ಪಾಲ್ ಸಿಂಗ್ ಹೇಳಿದರು.

ಭುವನೇಶ್ವರ್ ಕುಮಾರ್ ಸೌತ್ ಇಂಡಿಯನ್ ನಟಿ ಅನುಸ್ಮೃತಿ ಸರ್ಕಾರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಈ ಹಿಂದೆ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.

ಕೊಲಂಬೋದಲ್ಲಿ ಲಂಕಾ ವಿರುದ್ಧ ನಡೆದ ಐದನೇ ಏಕದಿನ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ 9.4 ಓವರ್ ಎಸೆದು 42 ರನ್ ನೀಡಿ ಐದು ವಿಕೆಟ್ ಪಡೆಯುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಇದನ್ನೂ ಓದಿ: ಐಸಿಸಿ ಏಕದಿನ ಬೌಲಿಂಗ್ ಪಟ್ಟಿಯಲ್ಲಿ ಭುವನೇಶ್ವರ್ ಕುಮಾರ್ ಗೆ ಎಷ್ಟನೇ ಶ್ರೇಯಾಂಕ ಗೊತ್ತಾ?

 

Share This Article
Leave a Comment

Leave a Reply

Your email address will not be published. Required fields are marked *