ಕಾಮಗಾರಿಗೆ ತೋಡಿದ ಗುಂಡಿಗೆ ಬಿದ್ದ ಕಾರ್: ಚಾಲಕ, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

By
1 Min Read

ಧಾರವಾಡ: ಆರು ವರ್ಷಗಳಿಂದ ಕುಟ್ಟುತ್ತಾ ಸಾಗಿರುವ ಹುಬ್ಬಳ್ಳಿಯ ಬಿಆರ್‍ಟಿಎಸ್ ಕಾಮಗಾರಿಗೆ ಹಿಡಿ ಶಾಪ ಹಾಕದವರೇ ಇಲ್ಲಾ. ಕಾಮಗಾರಿಗಾಗಿ ತೋಡಿದ ಗುಂಡಿಯಿಂದ ಒಂದಲ್ಲಾ ಒಂದು ಅನಾಹುತಗಳು ನಡೆಯುತ್ತಲೇ ಇವೆ.

ಹುಬ್ಬಳ್ಳಿಯ ಉನಕಲ್ ಕರೆ ಮುಂಭಾಗದಲ್ಲಿರೋ ಸ್ಕೋಡಾ ಕಾರ್ ಶೋ ರೂಮ್ ಬಳಿ ಬಿಆರ್‍ಟಿಎಸ್ ಕಾಮಗಾರಿಗೆ ತೋಡಿದ ಗುಂಡಿಯಲ್ಲಿ ಕಾರ್ ಬಿದ್ದು, ಚಾಲಕ ಮತ್ತು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನವನಗರ ನಿವಾಸಿ ಶ್ರೀಧರ್ ಎಂಬವರ ಕಾರ್ ಇದಾಗಿದ್ದು, ಕುಟುಂಬ ಸಮೇತರಾಗಿ ಹುಬ್ಬಳ್ಳಿಯಿಂದ ಧಾರವಾಡ ಕಡೆಗೆ ಹೊರಟಾಗ ಈ ಅವಘಡ ಸಂಭವಿಸಿದೆ. ಇನ್ನು ಕಾಮಗಾರಿಯ ವಿಳಂಬದ ಹಿನ್ನೆಲೆಯಲ್ಲಿ ಈ ರೀತಿಯ ಅನಾಹುತಗಳು ಹುಬ್ಬಳ್ಳಿ-ಧಾರವಾಡ ರಸ್ತೆಯಲ್ಲಿ ಹೆಚ್ಚಾಗಿದ್ದು ಜನರು ಕೈಯಲ್ಲಿ ಪ್ರಾಣ ಹಿಡಿದುಕೊಂಡು ಸಂಚರಿಸುವ ಸ್ಥಿತಿ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *