ಕೆರೆಗಳನ್ನು ಕೊಲ್ಲುವುದೆಂದರೆ ನಮ್ಮ ತಾಯಿ ಪ್ರಕೃತಿಯನ್ನ ಹತ್ಯೆಗೈದಂತೆ: ಸರ್ಕಾರಕ್ಕೆ ಸುದೀಪ್ ನೋವಿನ ಪತ್ರ

Public TV
1 Min Read

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಪರಿಸರ ಕಾಳಜಿ ಕುರಿತು ಕನ್ನಡ ಚಿತ್ರರಂಗದ ಹೆಬ್ಬುಲಿ ಘರ್ಜಿಸಿದೆ. ಕೆರೆಗಳ ಸಂರಕ್ಷಣೆ ಕುರಿತು ಕಾಳಜಿವಹಿಸುವಂತೆ ಕಿಚ್ಚ ಸುದೀಪ್ ಮಂಗಳವಾರ ಸಂಜೆ ಗೂಗಲ್ ಪ್ಲಸ್ ನಲ್ಲಿ ಪತ್ರ ಬರೆದು ಮನವಿ ಮಾಡಿದ್ದಾರೆ.

`ನಾನೊಬ್ಬ ನಟನಾಗಿ ಹೇಳ್ತಿಲ್ಲ ನಾನೊಬ್ಬ ಸಾಮಾನ್ಯ ವ್ಯಕ್ತಿಯಾಗಿ ಹೇಳ್ತಿದ್ದೇನೆ ಅಂದಿರೋ ಕಿಚ್ಚ, ತಮ್ಮ ಪತ್ರದಲ್ಲಿ ಡಿನೋಟಿಫಿಕೇಶನ್ ವಿರುದ್ಧ ಕಿಡಿಕಾರಿದ್ದಾರೆ. ಇರುವ ಬೆರಳೆಣಿಕೆಯಷ್ಟು ಕೆರೆಗಳನ್ನ ಕಾಪಾಡಿ. ಡಿನೋಟಿಫಿಕೇಷನ್ ಭೂತದಿಂದ ಸಾವಿನ ಅಂಚಿಗೆ ತಲುಪಿರುವ ಬೆಂಗಳೂರಿನ ಕೆರೆಗಳನ್ನ ಪಾರು ಮಾಡಿ’ ಎಂದು ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.

`ಕೆರೆಗಳು ನಮ್ಮ ಜೀವನಾಡಿ ಅವುಗಳಿಗೆ ಜೀವ ತುಂಬುವುದೆಂದರೆ ಪ್ರಕೃತಿಗೆ ಜೀವತುಂಬಿದಂತೆ. ಇಲ್ಲಿರುವ ಪ್ರತಿ ಗಿಡ, ಮರ, ಪ್ರಾಣಿಗಳು ಮನುಷ್ಯರೂ ಪ್ರತಿಯೊಂದು ಪ್ರಕೃತಿಯ ಭಾಗವೇ. ಕೆರೆಗಳನ್ನ ಕೊಲ್ಲುವುದೆಂದರೆ ನಮ್ಮ ತಾಯಿ ಪ್ರಕೃತಿಯನ್ನ ಹತ್ಯೆಗೈದಂತೆ’ ಎಂದು ಕಿಚ್ಚ ತಮ್ಮದೇ ಆದ ಶೈಲಿಯಲ್ಲಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಸುದೀಪ್ ಈ ಮೂಲಕ ತಾವೊಬ್ಬ ನಟ ಮಾತ್ರವಲ್ಲ ಸಾಮಾಜಿಕ ಕಳಕಳಿಯನ್ನೂ ಹೊಂದಿರೋದನ್ನ ಮತ್ತೊಮ್ಮೆ ಸಾಬೀತುಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *