ಹೆಂಡತಿ ದಪ್ಪಗಿದ್ದಾಳೆಂದು ನಾನು ಟಾರ್ಚರ್ ಮಾಡಿಲ್ಲ- ಸ್ಟೋರಿಯಲ್ಲೊಂದು ಭಯಾನಕ ಟ್ವಿಸ್ಟ್!

Public TV
1 Min Read

ಬೆಂಗಳೂರು: ನಾನು ದಪ್ಪ ಇದ್ದೀನಿ ಅನ್ನೋ ಕಾರಣಕ್ಕೆ ಗಂಡ ಡೈವೋರ್ಸ್ ಕೇಳಿದ್ದಾರೆ. ಗಂಡನ ಮನೆಯವ್ರು ಕಿರುಕುಳ ಕೊಡ್ತಿದ್ದಾರೆ ಅಂತ ಆರೋಪಿಸಿ ಮಹಿಳೆಯೊಬ್ಬಳು ಸ್ಟೇಷನ್ ಮುಂದೆ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಳು. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಆದ್ರೆ ಈ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ.

ನನ್ನ ಹೆಂಡತಿ ವಿನುತಾ ನನ್ನ ತಂದೆ ತಾಯಿಯಿಂದ ಆಸ್ತಿ ಬರೆಸಿಕೊಳ್ಳುವ ಸಲುವಾಗಿ ಕೊಡಬಾರದ ಕಾಟ ಕೊಡ್ತಿದ್ದಾಳೆ. ಅಲ್ಲದೇ ಅತ್ಯಾಚಾರ ಆರೋಪದಲ್ಲಿ ಸುದ್ದಿಯಾಗಿದ್ದ ಹೆಸರಘಟ್ಟ ಗೋವಿಂದ್ ಅನ್ನೋ ವ್ಯಕ್ತಿ ಜೊತೆ ಅಕ್ರಮ ಸಂಬಂಧ ಇದೆ. ಅವನ ನಿರ್ದೇಶನದಂತೆ ಆಕೆ ನಮ್ಮ ಮೇಲೆಲ್ಲ ಸುಳ್ಳು ಸುಳ್ಳು ಕೇಸ್ ದಾಖಲಿಸ್ತಿದ್ದಾಳೆ ಎಂದು ವಿನುತಾ ಪತಿ ನರೇಂದ್ರ ಬಾಬು ಆರೋಪಿಸಿದ್ದಾರೆ.

ವಿನುತಾ ತನ್ನ ಪತಿಯ ಮನೆಮುಂದೆ ಬಂದು ಕಲ್ಲಿನಿಂದ ಮನೆಯ ಬಾಗಿಲನ್ನ ಒಡೆದುಹಾಕೋಕೆ ಪ್ರಯತ್ನಿಸಿರೋದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಅಲ್ಲದೆ ಬಾಡಿಗೆ ವಿಚಾರದಲ್ಲಿ ಬಾಡಿಗೆದಾರರ ಮೇಲೆ ಹಲ್ಲೆ ಮಾಡಿರುವ ದೃಶ್ಯ ಕೂಡ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಅಕ್ಕಪಕ್ಕದ ಮನೆಯವರೆಲ್ಲಾ ವಿನುತಾಳನ್ನ ಛೀ.. ಥೂ.. ಅಂತ ಉಗೀತಿದ್ದಾರೆ. ವಿನುತಾಳಿಗೆ ಬುದ್ಧಿ ಹೇಳೋಕೆ ಹೋದ ವೃದ್ಧನ ಮೇಲೆಯೇ ರೇಪ್ ಕೇಸ್ ಹಾಕಿದ್ದಾಳೆ.

ವಿನುತಾ ಹಾಗೂ ನರೇಂದ್ರ ಬಾಬು 7 ವರ್ಷಗಳ ಹಿಂದೆ ಮದುವೆಯಾಗಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ವಾಸವಿದ್ದಾರೆ. ಮದುವೆಯಾಗಿ ಒಂದು ವರ್ಷ ಅಷ್ಟೇ ಚೆನ್ನಾಗಿದ್ವಿ. ಆಮೇಲೆ ಸಂಸಾರದಲ್ಲಿ ಬರೀ ಗಲಾಟೆ ಅಂತ ವಿನುತಾ ಪತಿ ನರೇಂದ್ರ ಬಾಬು ಬೇಸರ ವ್ಯಕ್ತಪಡಿಸಿದ್ರು.

 

 

Share This Article
Leave a Comment

Leave a Reply

Your email address will not be published. Required fields are marked *