ಎಸ್ಪಿ ಮೇಡಂ.. ರಕ್ಷಣೆ ಕೊಡಿ: ಕೈ ಕಳೆದುಕೊಂಡ ಮಂಡ್ಯದ ರೌಡಿಶೀಟರ್ ನಿಂದ ವಿಡಿಯೋ ರೆಕಾರ್ಡ್

Public TV
1 Min Read

ಮಂಡ್ಯ: ಎಸ್ಪಿ ಮೇಡಂ ನೀವು ತುಂಬಾ ನಿಷ್ಟಾವಂತರು ಅಂತಾರೆ. ನಿಮ್ಮ ಮೇಲೆ ತುಂಬಾ ನಂಬಿಕೆಯಿಟ್ಟಿದ್ದೇನೆ ರಕ್ಷಣೆ ಕೊಡಿ ಅಂತಾ ರೌಡಿಶೀಟರೊಬ್ಬ ವಿಡಿಯೋ ರೆಕಾರ್ಡ್ ಮಾಡಿ ಎಸ್ಪಿಗೆ ಕಳುಹಿಸಿ ಮೊರೆಯಿಟ್ಟಿದ್ದಾನೆ.

ಇತ್ತೀಚೆಗೆ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ 21 ವರ್ಷದ ರೌಡಿ ಶೀಟರ್ ವರುಣ್ ಮೇಲೆ ಮತ್ತೊಂದು ಗುಂಪು ಮಾರಣಾಂತಿಕವಾಗಿ ಹಲ್ಲೆ ನಡೆಸಿತ್ತು. ಹಲ್ಲೆಯಲ್ಲಿ ವರುಣ್ ಬಲಗೈ ತುಂಡಾಗಿದ್ದು, ತಲೆಗೆ ತೀವ್ರ ಪೆಟ್ಟಾಗಿತ್ತು. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೌಡಿ ಶೀಟರ್ ವರುಣ್, ತನ್ನ ಮೇಲೆ ಹಲ್ಲೆ ನಡೆದ ರೀತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ.

ಏನಿದೆ ವಿಡಿಯೋದಲ್ಲಿ?: ನಾನು ಜುಲೈ 16 ರಂದು ಕ್ರಿಕೆಟ್ ಆಡಿ ಗೆಳೆಯರಾದ ರೇಣು, ಪ್ರಜ್ವಲ್ ಜೊತೆ ಕುಳಿತಿದ್ದೆ. ಈ ಸಂದರ್ಭದಲ್ಲಿ ವ್ಯಾಸ, ಪುಟಾಣಿ, ಸೋಮ ಸೇರಿದಂತೆ ಏಳು ಜನ ಕಾರಲ್ಲಿ ಬರ್ತಾರೆ. ಮೊದಲು ಕಾರಲ್ಲಿ ನನಗೆ ಗುದ್ದುತ್ತಾರೆ. ನಾನು ಎದ್ದು ಓಡುತ್ತೇನೆ. ಆದರೂ ಬಿಡದೇ ತಲೆಗೆ ಬಲವಾಗಿ ಹೊಡೀತಾರೆ, ಕೈ ಕತ್ತರಿಸುತ್ತಾರೆ. ಬದುಕಿದ್ದಾನೆ ಅಂತಾ ಮತ್ತೆ ಅಟ್ಯಾಕ್ ಮಾಡ್ತಾರೆ. ನನ್ನ ಮೇಲೆ ಅಟ್ಯಾಕ್ ಮಾಡಲು ತೊಪ್ಪನಹಳ್ಳಿ ಪ್ರಕಾಶ್, ಕೆಂಗಲ್, ಜೈಲಲ್ಲಿರುವ ಗೆಡ್ಡೆ ಗಿರಿ ಕಾರಣರು.

ನನ್ನದು ಡಿಪ್ಲೊಮೋ ಆಗಿದೆ. ನಾನು ಇಂಜಿನಿಯರಿಂಗ್ ಸೇರಬೇಕಿತ್ತು. ನಮ್ಮ ಮನೆಯವರನ್ನು ಯಾರು ನೋಡ್ಕೋತಾರೆ. ಮೇಡಂ ನೀವು ತುಂಬಾ ನಿಷ್ಟಾವಂತರು ಅಂತಾರೆ. ಎಸ್ಪಿ ಮೇಡಂ ಇದ್ದಾರೆ. ತಲೆ ಕೆಡಿಸಿಕೊಳ್ಳಬೇಡ ಅಂತಿದ್ದಾರೆ. ನಿಮ್ಮ ಮೇಲೆ ನಂಬಿಕೆಯಿಟ್ಟಿದ್ದೇನೆ. ನನಗೆ ರಕ್ಷಣೆ ಕೊಡಿ ಅಂತಾ ರೌಡಿ ಶೀಟರ್ ಎಸ್ಪಿಗೆ ಮೊರೆಯಿಟ್ಟಿರುವ ವಿಡಿಯೋ ವಾಟ್ಸಪ್‍ನಲ್ಲಿ ಹರಿದಾಡುತ್ತಿದೆ.

https://www.youtube.com/watch?v=3z3Lzx1FcF0&feature=youtu.be

Share This Article
Leave a Comment

Leave a Reply

Your email address will not be published. Required fields are marked *