ಮಳೆಗಾಗಿ 5 ದಿನದಿಂದ ವೃದ್ಧೆಯಿಂದ ಉಪವಾಸ

Public TV
1 Min Read

ಧಾರವಾಡ: ನಿರಂತರ ಬರಗಾಲದಿಂದ ತತ್ತರಿಸುತ್ತಿರುವ ರಾಜ್ಯಕ್ಕೆ ಉತ್ತಮ ಮಳೆಯಾಗಲಿ ಎಂದು ವೃದ್ಧೆಯೊಬ್ಬರು ಕಳೆದ ಐದು ದಿನಗಳಿಂದ ಉಪವಾಸ ವ್ರತವನ್ನು ಹಮ್ಮಿಕೊಂಡಿದ್ದಾರೆ.

ನವಲಗುಂದ ಪಟ್ಟಣದ ಅಂಬೇಡ್ಕರ್ ನಗರದ ಮಹಿಳೆ ಹನಮವ್ವ ದುರ್ಗಪ್ಪ ದೊಡ್ಡಮನಿ (65) ಮಳೆಗಾಗಿ ಪ್ರಾರ್ಥಿಸಿ ಕಳೆದ ಐದು ದಿನಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ದುರ್ಗಾಮ್ಮ ದೇವಸ್ಥಾನದಲ್ಲಿ ಉಪವಾಸ ಕೈಗೊಂಡಿರುವ ಹನಮವ್ವ ಗುರುವಾರದಿಂದ ಒಂದು ಹನಿ ನೀರನ್ನು ಕುಡಿದಿಲ್ಲ. ಅವರ ವ್ರತಕ್ಕೆ ಗ್ರಾಮದ ಕೆಲ ಮಹಿಳೆಯರು ಬೆಂಬಲ ನೀಡಿದ್ದಾರೆ.

ಉಪವಾಸದಿಂದ ಅಸ್ವಸ್ಥರಾದ ಹನುಮವ್ವ ಅವರ ಆರೋಗ್ಯ ತಪಾಸಣೆ ಮಾಡಿದ ವೈದ್ಯರು ಎಳನೀರು ಸೇವಿಸುವಂತೆ ಸೂಚಿಸಿದರೂ ಹನುಮವ್ವ ಏನೇನೂ ಸ್ವೀಕರಿಸಿಲ್ಲ. ಹೀಗಾಗಿ ಮಳೆಯಾಗುವವರೆಗೂ ತೊಟ್ಟು ನೀರು ಕುಡಿಯುವದಿಲ್ಲ ಎಂಬ ದಿಟ್ಟ ನಿರ್ಧಾರದಿಂದ ವ್ರತಾಚರಣೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *