ತುಮಕೂರು: ಕಿಡಿಗೇಡಿಗಳಿಂದ ರಾಷ್ಟ್ರಧ್ವಜದಲ್ಲಿ ವಾಮಾಚಾರ

Public TV
0 Min Read

ತುಮಕೂರು: ರಾಷ್ಟ್ರಧ್ವಜದಲ್ಲಿ ಮಾಟ-ಮಂತ್ರ ಮಾಡುವ ಮೂಲಕ ಧ್ವಜಕ್ಕೆ ಅವಮಾನ ಎಸಗಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಹಾಲ್ಬೂರಿನಲ್ಲಿ ನಡೆದಿದೆ.

ತ್ರಿವರ್ಣ ಧ್ವಜದಲ್ಲಿ ನಿಂಬೆ ಹಣ್ಣು, ಕುಡಿಕೆ, ಕುಂಕುಮಗಳನ್ನು ಇಟ್ಟು ವಾಮಾಚಾರ ಮಾಡಲಾಗಿದೆ. ಮೊದಲು ಹಸಿರು ಬಟ್ಟೆಯಲ್ಲಿ ಮಾಟ ಮಂತ್ರದ ವಸ್ತುಗಳನ್ನು ಕಟ್ಟಿ ಬಳಿಕ ಅದಕ್ಕೆ ರಾಷ್ಟ್ರದ್ವಜ ಸುತ್ತಲಾಗಿದೆ. ಹೀಗೆ ಕಟ್ಟಿದ ಪೊಟ್ಟಣವನ್ನು ಹಾಲ್ಬೂರು ಕೆರೆಯ ಮಲೀನ ಪ್ರದೇಶದಲ್ಲಿ ಎಸೆದು ಅವಮಾನ ಮಾಡಲಾಗಿದೆ. ಇದನ್ನು ಕಂಡ ಗ್ರಾಮಸ್ಥರು ಧ್ವಜವನ್ನು ಬೇರ್ಪಡಿಸಿ ಮನೆಗೆ ಕೊಂಡೊಯ್ದಿದ್ದಾರೆ.

ನೊಣವಿನಕೆರೆ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *