ಬ್ಯಾಂಕಿನಲ್ಲಿ ಕನ್ನಡ ಯಾಕಿಲ್ಲ: ಕನ್ನಡಿಗರಿಂದ #NammaBankuKannadaBeku ಅಭಿಯಾನ

Public TV
1 Min Read

ಬೆಂಗಳೂರು: ಭಾರತೀಯ ಭಾಷೆಗಳಲ್ಲಿ ಸೇವೆ ದೊರಕಿಸಬೇಕೆಂಬ ಕಾನೂನು ಇದ್ದರೂ ಬ್ಯಾಂಕುಗಳಲ್ಲಿ ಎಲ್ಲಾ ಸೇವೆಗಳೂ ಭಾರತೀಯ ಭಾಷೆಗಳಲ್ಲಿ ದೊರೆಯುತ್ತಿಲ್ಲದ ವಿಷಯವಾಗಿ ಜಾಗೃತಿ ಮೂಡಿಸಲು ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ.

ಕನ್ನಡ ಗ್ರಾಹಕರ ಕೂಟವು #NammaBankuKannadaBeku ಟ್ವಿಟ್ಟರ್ ಅಭಿಯಾನವನ್ನು ಹಮ್ಮಿಕೊಂಡಿದ್ದು ಮಂಗಳವಾರ ಸಂಜೆಯಿಂದ ಟ್ರೆಂಡಿಂಗ್ ಟಾಪಿಕ್ ಆಗಿದೆ.

ಚೆಕ್, ಎಟಿಎಂ ಸೇರಿದಂತೆ ಹಲವು ಸೇವೆಗಳಲ್ಲಿ ಕನ್ನಡ ಯಾಕಿಲ್ಲ ಎಂದು ಬ್ಯಾಂಕ್ ಗಳನ್ನು ಪ್ರಶ್ನಿಸಿ ಟ್ವೀಟ್ ಮಾಡುತ್ತಿದ್ದಾರೆ. ನಾವು ಸುಮ್ಮನೆ ಇದ್ದ ಕಾರಣ ಬ್ಯಾಂಕಿನಲ್ಲಿ ಕನ್ನಡ ಮಾಯವಾಗಿದೆ. ಇನ್ನು ಮುಂದೆ ಈ ರೀತಿ ಆಗಬಾರದು. ಮೆಟ್ರೋದಲ್ಲಿ ಹಿಂದಿ ಹೇರಿಕೆ ಅಭಿಯಾನಕ್ಕೆ ಕೈ ಜೋಡಿಸಿದಂತೆ ಎಲ್ಲರೂ ಈ ಅಭಿಯಾನಕ್ಕೆ ಕೈ ಜೋಡಿಸಬೇಕೆಂದು ಕನ್ನಡಿಗರು ಮನವಿ ಮಾಡಿಕೊಳ್ಳುತ್ತಿದ್ದಾರೆ.

ವಿಜಯ ಬ್ಯಾಂಕ್, ಕೆನರಾ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಎಸ್‍ಬಿಎಂ, ಕಾರ್ಪೋರೇಷನ್ ಬ್ಯಾಂಕ್ ಗಳು ಕರ್ನಾಟಕದಲ್ಲೇ ಹುಟ್ಟಿದರೂ ಈಗ ಹಿಂದಿ ಪ್ರಚಾರ ಮಾಡುವ ಸಭಾಗಳಾಗಿ ಪರಿವರ್ತನೆಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

https://twitter.com/Bond_Jay_Bond/status/884766681205137409

https://twitter.com/Abhinandan248/status/884580538165547008

https://twitter.com/rsponnathpur/status/884768356284350465

https://twitter.com/vivek_shankar15/status/884754502858842112

https://twitter.com/vivek_shankar15/status/884752522685980672

Share This Article
Leave a Comment

Leave a Reply

Your email address will not be published. Required fields are marked *