ಕಮ್ಯುನಿಸ್ಟ್ ವಾದಿ ವೇಣುಗೋಪಾಲ್ ವಿಚಾರಧಾರೆ ರಾಜ್ಯದಲ್ಲಿ ತುಂಬಲು ಬಿಡಲ್ಲ: ಎಬಿವಿಪಿ ಎಚ್ಚರಿಕೆ

Public TV
1 Min Read

ಬೆಂಗಳೂರು: ಎಬಿವಿಪಿ, ಆರ್‍ಎಸ್‍ಎಸ್ ವಿಚಾರಧಾರೆಗಳಿಂದ ಪ್ರೇರಿತವಾಗಿದೆ. ಧೈರ್ಯ ಇದ್ರೆ ನಮ್ಮ ಸಂಘಟನೆಯನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಮುಟ್ಟಲಿ ಎಂದು ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನಯ್ ಬಿದರೆ ಸವಾಲು ಎಸೆದಿದ್ದಾರೆ.

ವೇಣುಗೋಪಾಲ್ ಅವರು ಆರ್‍ಎಸ್‍ಎಸ್, ಎಬಿವಿಪಿ ವಿದ್ಯಾರ್ಥಿ ಸಂಘಟನೆಗಳಿಗೆ ಬೆಂಬಲ ನೀಡುತ್ತಿರುವ ಕಾಲೇಜುಗಳ ಪಟ್ಟಿಯನ್ನು ನೀಡುವಂತೆ ಕಾರ್ಯಕರ್ತರಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಅವರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ವೇಣುಗೋಪಾಲ್ ಕಮ್ಯುನಿಸ್ಟ್ ವಾದಿಯಾಗಿದ್ದು,  ಅವರ ವಿಚಾರಧಾರೆ ರಾಜ್ಯದಲ್ಲಿ ತುಂಬಲು ನಾವು ಬಿಡುವುದಿಲ್ಲ. ಯಾರೋ ಯಾಕೆ ಲಿಸ್ಟ್ ಕೊಡಬೇಕು. ವೇಣುಗೋಪಾಲ್ ಎಬಿವಿಪಿ ಕಚೇರಿಗೆ ಬರಲಿ ನಾವೇ ಪಟ್ಟಿ ನೀಡುತ್ತೇವೆ ಎಂದು ಹೇಳಿದರು.

ವೇಣುಗೋಪಾಲ್ ಅವರ ಅವರ ಧಮ್ಕಿ ಏನೇ ಇದ್ದರೂ ಕೇರಳದಲ್ಲಿ ಇರಲಿ. ರಾಜ್ಯದಲ್ಲಿ ಹಿಂಸಾತ್ಮಕ ಕೃತ್ಯ ಮಾಡಲು ಕಾಂಗ್ರೆಸ್ ಸಂಚು ರೂಪಿಸಿದ್ದು ಇದಕ್ಕೆ ಎಬಿವಿಪಿ ಹೆದರಲ್ಲ ಎಂದು ವಿನಯ್ ಬಿದರೆ ಖಡಕ್ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಆರ್‍ಎಸ್‍ಎಸ್, ಎಬಿವಿಪಿ ಪರ ಇರೋ ಕಾಲೇಜುಗಳ ಪಟ್ಟಿ ಕೊಡಿ: ವೇಣುಗೋಪಾಲ್

 

Share This Article
Leave a Comment

Leave a Reply

Your email address will not be published. Required fields are marked *