ಆಸ್ತಿ ವಿವಾದ- ಗುದ್ದಲಿಯಿಂದ ಹೊಡೆದು ತಂದೆ, ಇಬ್ಬರು ಮಕ್ಕಳ ಬರ್ಬರ ಹತ್ಯೆ

Public TV
1 Min Read

ವಿಜಯಪುರ: ಆಸ್ತಿ ವಿವಾದ ಹಿನ್ನೆಲೆಯಲ್ಲಿ ದಾಯಾದಿಗಳಿಂದ ತಂದೆ ಹಾಗೂ ಆತನ ಇಬ್ಬರು ಮಕ್ಕಳ ಬರ್ಬರ ಕೊಲೆ ನಡೆದಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಹೊಸತಾವರಖೇಡ ಗ್ರಾಮದಲ್ಲಿ ಈ ಕೊಲೆ ನಡೆದಿದೆ. ಸಲಕಿ, ಗುದ್ದಲಿ, ಹಾರಿಯಿಂದ ಹೊಡೆದು 55 ವರ್ಷದ ಸಂಗಪ್ಪ ಹರಿಂದ್ರಾಳ, 25 ವರ್ಷದ ಶರಣಬಸಪ್ಪ ಸಂಗಪ್ಪ ಹರಿಂದ್ರಾಳ ಹಾಗೂ 23 ವರ್ಷದ ಮಲ್ಲಿಕಾರ್ಜುನ ಹರಿಂದ್ರಾಳ ಕೊಲೆಗೀಡಾದ ದುರ್ದೈವಿಗಳು.

ಸಂಗಪ್ಪನ ಅಣ್ಣನ ಮಗ ಸಾಹೇಬಗೌಡ ಹರಿಂದ್ರಾಳ ಹಾಗೂ ಸಹೋದರರು ಸೇರಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.

ಈ ಸಂಬಂಧ ಅಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *