ಆಧಾರ್ ಕಾರ್ಡ್‍ಗಾಗಿ ತಾಲೂಕು ಆಫೀಸಿಗೆ ಮಹಿಳೆ ತೆವಳಿಕೊಂಡೇ ಹೋದ ಮನಕಲಕುವ ವಿಡಿಯೋ ನೋಡಿ

Public TV
1 Min Read

ದಾವಣಗೆರೆ: ಮಹಿಳೆಯೊಬ್ಬಳು ಆಧಾರ್ ಕಾರ್ಡ್ ಗಾಗಿ ತಾಲೂಕು ಅಫೀಸಿಗೆ ತೆವಳಿಕೊಂಡೇ ಹೋದ ಮನ ಕಲುಕುವ ಘಟನೆ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕು ಕಛೇರಿಯಲ್ಲಿ ನಡೆದಿದೆ.

ಹರಪ್ಪನಹಳ್ಳಿ ತಾಲ್ಲೂಕಿನ ಗೌರಮ್ಮ ಅಂಗವಿಕಲೆಯಾಗಿದ್ದು, ಅಂಗವಿಕಲರ ವೇತನಕ್ಕೆ ಆಧಾರ್ ಕಡ್ಡಾಯ ಮಾಡಿರುವುದರಿಂದ ಐದು ತಿಂಗಳಿನಿಂದ ತಾಲೂಕು ಕಛೇರಿಗೆ ಅಲೆದಾಡುತ್ತಿದ್ದಾರೆ. ಇದ್ದ ಊರಿನಲ್ಲಿ ಆಧಾರ್ ಕಾರ್ಡ್ ಮಾಡಿಸಲು ಮಹಿಳೆಯ ಕೈ ಬೆರಳುಗಳು ಸರಿ ಇಲ್ಲದ ಕಾರಣ ಹರಪ್ಪನಹಳ್ಳಿ ತಾಲೂಕು ಕಛೇರಿಗೆ ಹೋಗುವಂತೆ ಹೇಳಿದ್ದಾರೆ.

ಆದ್ರೆ ಮಹಿಳೆ ಮಾತ್ರ ಆಧಾರ್ ಕಾರ್ಡ್ ಮಾಡಿಸಲು ತೆವಳುತ್ತಾ ತಾಲೂಕು ಕಚೇರಿಗೆ ಅಲೆದಾಟ ನಡೆಸಿದ್ರೂ ಅಧಿಕಾರಿಗಳಿಗೆ ಮಾತ್ರ ಕಿಂಚಿತ್ತೂ ಕರುಣೆ ಬಂದಿಲ್ಲ. ಪ್ರತಿನಿತ್ಯ ಈ ರೀತಿ ಬಂದು ಹೋಗುತ್ತಿರುವುದನ್ನು ಅಲ್ಲಿನ ಸ್ಥಳೀಯರು ನೋಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸದ್ಯ ಅಧಿಕಾರಿಗಳು ಆಧಾರ್ ಕಾರ್ಡ್ ಮಾಡಿಕೊಟ್ಟಿದ್ದಾರೆ. ಒಬ್ಬಂಟಿಯಾಗಿಯೇ ಅಂಗವಿಕಲರ ವೇತನವನ್ನೇ ನಂಬಿ ಜೀವನ ನಡೆಸುತ್ತಿರೋ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ. ಮಹಿಳೆ ತೆವಳಿಕೊಂಡು ಹೋಗುತ್ತಿರುವ ವಿಡಿಯೋವನ್ನು ಸ್ಥಳೀಯರು ಸೆರೆಹಿಡಿದು ಮಾಧ್ಯಮಗಳಿಗೆ ನೀಡಿದ್ದಾರೆ.

https://www.youtube.com/watch?v=iojQckkOSMw&feature=youtu.be

Share This Article
Leave a Comment

Leave a Reply

Your email address will not be published. Required fields are marked *