ಉಡುಪಿಯಲ್ಲಿ ಭಾರೀ ಮಳೆಗೆ ಮರ ಬಿದ್ದು 2 ತಿಂಗಳ ಹಿಂದೆ ನಿರ್ಮಿಸಿದ್ದ ಅಂಗಡಿ ಜಖಂ

Public TV
1 Min Read

ಉಡುಪಿ: ಜಿಲ್ಲೆಯಲ್ಲಿ ಬೆಳಗ್ಗೆಯಿಂದ ಭರ್ಜರಿ ಮಳೆಯಾಗುತ್ತಿದೆ. 10 ದಿನದ ಹಿಂದೆ ಮಳೆ ಆರಂಭವಾಗಿದ್ದರೂ ಇಂದು ಸುರಿಯುತ್ತಿರುವ ಮಳೆ ಮುಂಗಾರಿನ ಪ್ರವೇಶವಾದಂತಾಗಿದೆ.

ಭಾರೀ ಮಳೆಗೆ ಮರಗಳು ಧರೆಗುರುಳಿದ ಘಟನೆ ನಗರದ ಕುಂಜಿಬೆಟ್ಟುವಿನ ಬೈಲಕೆರೆಯಲ್ಲಿ ನಡೆದಿದೆ. ಇಸ್ಮಾಯಿಲ್ ಎಂಬವರ ಅಂಗಡಿ ಮೇಲೆ ಭಾರೀ ಗಾತ್ರದ ಮರ ಬಿದ್ದು ಅಂಗಡಿ ಸಂಪೂರ್ಣ ನಜ್ಜುಗುಜ್ಜಾಗಿದೆ.

2 ತಿಂಗಳ ಹಿಂದೆಯಷ್ಟೇ ಇಸ್ಮಾಯಿಲ್ ಹೊಸ ಅಂಗಡಿಯನ್ನು ನಿರ್ಮಿಸಿ ವ್ಯಾಪಾರ ಶುರುಮಾಡಿದ್ದರು. ಇದೀಗ ಮೊದಲ ಮಳೆಗೆ ಅಂಗಡಿ ಜಖಂ ಆಗಿದ್ದು, ಸುಮಾರು 3 ಲಕ್ಷ ರುಪಾಯಿ ನಷ್ಟವಾಗಿದೆ ಅಂತಾ ಅಂದಾಜಿಸಲಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಮರ ತೆರವು ಕಾರ್ಯಾಚರಣೆ ಮಾಡಿದೆ. ಒಟ್ಟಿನಲ್ಲಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು ಕೆಲವೆಡೆ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *