ರಶ್ಮಿಕಾ ರಿಸೆಪ್ಷನ್ ಸೀರೆಯಲ್ಲಿ ಕನ್ನಡದ ಕಂಪು – ಗಂಡಭೇರುಂಡ, ಕೊಡವರ ಒಡಿಕತ್ತಿ ಕಸೂತಿ

2 Min Read

ಹೈದ್ರಾಬಾದ್‍ನಲ್ಲಿ ಬುಧವಾರ ರಶ್ಮಿಕಾ (Rashmika Mandanna), ವಿಜಯ್ ದೇವರಕೊಂಡ (Vijay Deverakonda) ಅದ್ಧೂರಿ ಆರತಕ್ಷತೆ ನಡೆದಿದೆ. ಇಲ್ಲಿ ನೂತನ ವಧು ವರರ ವಸ್ತ್ಯವಿನ್ಯಾಸ ಬಹಳ ಗಮನ ಸೆಳೆದಿದೆ. ಸರಳ ಸಾಂಸ್ಕೃತಿಕ  ಶೋಭೆ ಕಂಡುಬಂದಿದೆ. ವಧು ರಶ್ಮಿಕಾ ಧರಿಸಿದ್ದ ಕಡು ಕೆಂಪು ಬಣ್ಣದ ಸೀರೆ ಇಡೀ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟ್ರೆಂಡ್ ಸೃಷ್ಟಿಮಾಡಿದೆ. ಪಾರಂಪರಿಕ ಐತಿಹಾಸಿಕ ಹಿನ್ನೆಲೆಯುಳ್ಳ ಅಪ್ಪಟ ರೇಶ್ಮೆ (Mysuru Silk Saree)
ಸೀರೆ ಧರಿಸಿ ಕನ್ನಡ ಸಾಂಸ್ಕೃತಿಕ ಮೆರುಗನ್ನ ಪ್ರತಿನಿಧಿಸಿದ್ದಾರೆ ರಶ್ಮಿಕಾ. ಹಾಗೆಯೇ ವಿಜಯ್ ದೇವರಕೊಂಡ ಕೂಡ ಮೈಸೂರು ಸಿಲ್ಕ್ ಪಂಚೆ ಶರ್ಟ್ ಶಲ್ಯ ಧರಿಸಿ ಕಂಗೊಳಿಸಿದ್ದಾರೆ. ರಶ್ಮಿಕಾ ಧರಿಸಿದ್ದ ಮೈಸೂರ್ ಸಿಲ್ಕ್ ಸೀರೆ ಬಹಳಷ್ಟು ವಿಶೇಷತೆಯನ್ನೊಳಗೊಂಡಿದೆ.

ಗಾಢ ಕೆಂಪು ಬಣ್ಣದ ನೇಯ್ದ ಮೈಸೂರು ರೇಶ್ಮೆ ಸೀರೆ ಕಪ್ಪು ಬಾರ್ಡರ್ ಹೊಂದಿದೆ. ಅದಕ್ಕೊಪ್ಪುವ ಬಾರ್ಡರ್ ಎಕ್ಸ್ಟ್ರಾ ಡಿಸೈನ್ ಮಾಡಿಸಿದ್ದಾರೆ ರಶ್ಮಿಕಾ. ಹೈನೆಕ್ ರವಿಕೆಗೆ ಸಿಂಪಲ್ ಕಸೂತಿ ಮಾಡಿಸಿರುವುದು ಮೈಸೂರು ಸೀರೆಗೆ ಹೆಚ್ಚುವರಿ ಕಸೂತಿ ಡಿಸೈನ್ ಬೇಕಾಗಿಲ್ಲ ಎಂಬುದರ ಸಂಕೇತ. ಬಾರ್ಡನ್‍ರನ್ನ ಮೈಸೂರು ಸಂಸ್ಥಾನದ ಲಾಂಛನ ಗಂಡಭೇರುಂಡ ರೇಶ್ಮೆ ಎಳೆಗಳ ನೇಯ್ಗೆ ಇದೆ. ಇನ್ನು ಇಲ್ಲಿ ಬಹಳ ಸೂಕ್ಷ್ಮವಾಗಿ ಗಮನಿಸಿದವರಿಗೆ ಮಾತ್ರವೇ ಅರ್ಥವಾಗುವ ಕೊಡವ ಶೈಲಿಯ ಡಿಸೈನ್‍ನ್ನು ರವಿಕೆಯಲ್ಲಿ ಗಮನಿಸಬಹುದು. ರವಿಕೆಯ ಬ್ಯಾಕ್‍ನೆಕ್ ಡಿಸೈನ್‍ನಲ್ಲಿ ಒಡಿಕತ್ತಿ ಕಸೂತಿ ಮಾಡಲಾಗಿದೆ. ಜೊತೆಗೆ ನಾಡಬಂದೂನ್ನೂ ಕಸೂತಿ ಮಾಡಲಾಗಿದೆ. ಇದು ಕೊಡವರ ಸಾಂಸ್ಕೃತಿಕ ಚಿನ್ಹೆಯಾಗಿದ್ದು ಕೊಡವ ಪುರುಷರು ತಮ್ಮ ಸೊಂಟಕ್ಕೆ ಸಿಕ್ಕಿಸಿಕೊಳ್ಳುವ ಮೊನಚಾದ, ಹಗುರವಾದ ಕೊಡವರಷ್ಟೇ ಬಳಸುತ್ತಿದ್ದ ಅಪರೂಪದ ಕತ್ತಿ ಶೈಲಿ ಇದು. ಕೊಡವ ಹೆಣ್ಣುಮಗಳು ರಶ್ಮಿಕಾ ಕೊಡವ ಶೈಲಿಯಲ್ಲಿ ಸೀರೆ ಉಡದಿದ್ದರೂ ಲಾಂಛನ ಬಳಸಿದ್ದಾರೆ. ಹೀಗೆ ಕನ್ನಡದ ಸಾಂಸ್ಕೃತಿಕ ಮೆರುಗು ರಶ್ಮಿಕಾ ಸೀರೆ ಡಿಸೈನ್‍ನಲ್ಲಿ ಮೇಳೈಸಿದೆ. ಇದನ್ನೂ ಓದಿ: ವಿಜಯ್, ರಶ್ಮಿಕಾ ಆರತಕ್ಷತೆಗೆ ತೆರಳಿ ಶುಭಕೋರಿದ ಡಿಕೆ ಶಿವಕುಮಾರ್

ರಶ್ಮಿಕಾ ತಾಯಿ ಸುಮನ್ ಮಂದಣ್ಣ ಕೊಡವ ಶೈಲಿಯಲ್ಲೇ ಸೀರೆ ಧರಿಸಿದ್ದಾರೆ. ಅದೂ ಕೂಡ ಸಾಂಸ್ಕೃತಿಕ ಹೆಜ್ಜೆ ಗುರುತೇ ಆಗಿದೆ. ಕೊಡವರು ಮಾತ್ರವೇ ಉಡುವ ಶೈಲಿ ಅದಾಗಿದ್ದು ದೇಶವೇ ನೋಡ್ತಿರೋ ಕಾರ್ಯಕ್ರಮದಲ್ಲಿ ಅದೂ ಕೂಡ ಹೈಲೈಟ್. ಇನ್ನು ವರ ವಿಜಯ್ ದೇವರಕೊಂಡ ಅಪ್ಪಟ ಮೈಸೂರ್ ಪಂಚೆ ಶಲ್ಯ ಸ್ಟೈಲ್ ರಶ್ಮಿಕಾ ಸೀರೆ ಲುಕ್‍ಗೆ ತಕ್ಕನಾಗಿದೆ. ಹೀಗೆ ರಶ್ಮಿಕಾ ವಿಜಯ್ ಆರತಕ್ಷತೆಯಲ್ಲಿ ಕನ್ನಡದ ಕಲಾವೈಭವ ಕಂಡುಬಂದಿದೆ.

ಹೆಂಗಳೆಯರ ವಾರ್ಡ್‍ರೋಬ್ ಕ್ವೀನ್ ಅಂದ್ರೆ ಅದು ಮೈಸೂರು ಸಿಲ್ಕ್ ಸೀರೆ. ಆದರೆ ಆರತಕ್ಷತೆ ಕಾರ್ಯಕ್ರಮ ಎಂದು ಬಂದಾಗ ಸಾಮಾನ್ಯವಾಗಿ ಗಾಢವಾಗಿ ಕಾಣುವ ಕಾಂಚೀವರಂ ಸೀರೆಗಳನ್ನ ಆಯ್ಕೆ ಮಾಡಿಕೊಳ್ಳುವುದು ವಾಡಿಕೆ. ಆದರೆ ಅತ್ಯಂತ ಆರಾಮದಾಯಕ ಮೈಸೂರು ಸೀರೆಯನ್ನು ಮಹಿಳೆಯರು ಇನ್ನಿತರ ಕಾರ್ಯಕ್ರಮಗಳಿಗೆ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ರಶ್ಮಿಕಾ ತಮ್ಮ ಜೀವನದ ಅಮೂಲ್ಯ ಘಟ್ಟದಲ್ಲಿ ಉಡುಪಿನ ಆಯ್ಕೆ ಬಂದಾಗ ತಾಯ್ನಾಡಿನ ಸಂಸ್ಕೃತಿಯನ್ನು ಗೌರವಿಸಿರುವುದು ಉತ್ತಮ ವಿಚಾರ. ರಶ್ಮಿಕಾ ಸ್ಟೈಲ್‍ಗೆ ಇದೀಗ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ರೀತಿ ಮೈಸೂರು ಸಿಲ್ಕ್ ಉದ್ಯಮಕ್ಕೆ ಪರೋಕ್ಷವಾಗಿ ಬ್ರ್ಯಾಂಡ್ ಆಗಿದ್ದಾರೆ ನವ ವಧು ರಶ್ಮಿಕಾ. ಇದನ್ನೂ ಓದಿ: ರಶ್ಮಿಕಾ ಗೃಹಲಕ್ಷ್ಮಿಯಾದ ಖುಷಿಯಲ್ಲಿ ಬಡವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಘೋಷಿಸಿದ ವಿಜಯ್ ದೇವರಕೊಂಡ

Share This Article