ಕೇಂದ್ರ ಸಚಿವರಿಗೆ ವಿಶ್ವಾಸಘಾತುಕವೆಂದ ರಾಹುಲ್ ಗಾಂಧಿ – ನೀವು ದೇಶದ ಶತ್ರುವೆಂದ ಸಚಿವ ರವನೀತ್ ಬಿಟ್ಟು

1 Min Read

– ಸಂಸದರಾಗಲು ಅಯೋಗ್ಯ; ಬಿಜೆಪಿ ಟೀಕೆ

- Advertisement -

ನವದೆಹಲಿ: ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಸಂಸತ್ (Parliament) ಆವರಣದಲ್ಲಿ ರೈಲ್ವೇ ಇಲಾಖೆ ರಾಜ್ಯ ಸಚಿವ ರವನೀತ್ ಸಿಂಗ್ ಬಿಟ್ಟುಗೆ (Ravneet Singh Bittu) `ವಿಶ್ವಾಸಘಾತುಕ’ ಅಂತ ನಿಂದಿಸಿರೋದು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

- Advertisement -

ಚೀನಾ ಅತಿಕ್ರಮಣ ಬಗ್ಗೆ ಚರ್ಚೆ ವಿಚಾರವಾಗಿ ಇಂಡಿ ಕೂಟದ 8 ಸಂಸದರನ್ನು ಅಮಾನತುಗೊಳಿಸಿರೋದನ್ನು ಖಂಡಿಸಿ ಇಂಡಿಕೂಟದ ಸಂಸದರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ, ಸಂಸತ್ತಿಗೆ ಬರುತ್ತಿದ್ದ ರವನೀತ್ ಬಿಟ್ಟುರನ್ನು ನೋಡಿದ ರಾಹುಲ್, `ಇಲ್ಲೊಬ್ಬ ವಿಶ್ವಾಸಘಾತುಕ’ ನಡೆದುಕೊಂಡು ಹೋಗುತ್ತಿದ್ದಾರೆ. ಅವರ ಮುಖ ನೋಡಿ ಎಂದರು. ಅಲ್ಲದೆ, ಹಲೋ ಬ್ರದರ್, ನನ್ನ ವಿಶ್ವಾಸಘಾತುಕ’ ಸ್ನೇಹಿತ. ಚಿಂತೆ ಮಾಡಬೇಡಿ. ಮುಂದೆ ಮತ್ತೆ ಕಾಂಗ್ರೆಸ್‌ಗೆ ಬರುತ್ತೀರಾ ಅಂದಿದ್ದಾರೆ. ಈ ವೇಳೆ, ಶೇಕ್ ಹ್ಯಾಂಡ್ ಮಾಡದ ಸಚಿವ ಬಿಟ್ಟು, ನೀವು `ದೇಶದ ಶತ್ರು’ ಅಂತ ರಾಹುಲ್ ಗಾಂಧಿಗೆ ತಿರುಗೇಟು ಕೊಟ್ಟಿದ್ದಾರೆ. ಅಲ್ಲದೇ, ಯುದ್ಧವನ್ನು ಗೆದ್ದಂತೆ ಕುಳಿತಿದ್ದಾರೆ ಎಂದು ಪ್ರತಿಭಟನಾನಿರತ ಸಂಸದರ ಕಡೆಗೆ ತಿರುಗಿ ಹೇಳಿದ್ದಾರೆ. ಇದನ್ನೂ ಓದಿ: U19 World Cup: ಆರನ್ ಜಾರ್ಜ್ ಶತಕ – ದಾಖಲೆಯ ಚೇಸ್‌ನೊಂದಿಗೆ ಫೈನಲ್‌ಗೆ ಭಾರತ ಲಗ್ಗೆ

- Advertisement -

ವಿವಾದದ ಬಳಿಕ ರಾಹುಲ್ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸಿದೆ. ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಬಿಡದಿರುವಾಗ ನಾವೇನು ಮಾಡಲು ಸಾಧ್ಯ? ಬಿಟ್ಟು ಅವರನ್ನು ಸಂಸದರನ್ನಾಗಿಸಿದ್ದು ಯಾರು? ದ್ರೋಹಿ ಬಗ್ಗೆ ಇನ್ನೇನು ಹೇಳಲಿ? ಎಂದು ಕಾಂಗ್ರೆಸ್ ಸಂಸದ ಅಮರಿಂದರ್ ರಾಜಾ ವಾರಿಂಗ್ ಹೇಳಿದ್ದಾರೆ. ಈ ಮಧ್ಯೆ, ರಾಹುಲ್ ಗಾಂಧಿ ಸಂಸದರಾಗಲು ಅಯೋಗ್ಯ. ಸಿಖ್ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಅಂತ ಬಿಜೆಪಿ ಕೆಂಡಕಾರಿದೆ. ಇದನ್ನೂ ಓದಿ: ನಾನು ಜೀವನದ ಕೊನೆಗಾಲದಲ್ಲಿದ್ದೇನೆ, ಈ ವೃದ್ಧನ ಮನವಿಗೆ ಸ್ಪಂದಿಸಿ ಕರ್ನಾಟಕ ರಕ್ಷಿಸಿ: ಹೆಚ್‌ಡಿಡಿ

- Advertisement -

Share This Article