ಸಾಲ ಹಿಂದಿರುಗಿಸದ್ದಕ್ಕೆ ಹೆಂಡ್ತಿ, ಮಕ್ಕಳನ್ನ ಹೊತ್ತೊಯ್ದರು- ಮನನೊಂದು ಪತಿ ಆತ್ಮಹತ್ಯೆ

Public TV
1 Min Read

ಹಾವೇರಿ: ಸಾಲದ ಹಣ ಹಿಂದಿರುಗಿಸದ ಹಿನ್ನಲೆಯಲ್ಲಿ ಪತ್ನಿ ಮತ್ತು ಮಕ್ಕಳನ್ನು ಹೊತ್ತುಕೊಂಡು ಹೋಗಿದ್ದಕ್ಕೆ ಮನನೊಂದು ಪತಿ ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ಹಾವೇರಿ ತಾಲೂಕಿನ ಕಾಟೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನ 38 ವರ್ಷ ವಯಸ್ಸಿನ ಉದಯ ಸಣ್ಣತಂಗಿ ಎಂದು ಗುರುತಿಸಲಾಗಿದೆ. ಹುಬ್ಬಳ್ಳಿಯಲ್ಲಿ ಉದಯ ಮತ್ತು ಪತ್ನಿ ಶೋಭಾ ಒಂದು ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ರು. ಸಾಲಾಗಾರರ ಕಿರುಕುಳ ತಾಳಲಾರದೇ ಉದಯ ಮತ್ತು ಅವರ ಕುಟುಂಬ ಊರು ಬಿಟ್ಟು ಗದಗ ಜಿಲ್ಲೆ ಶಿರಹಟ್ಟಿ ತಾಲೂಕು ಬಾಲೇಹೂಸೂರು ಗ್ರಾಮಕ್ಕೆ ಬಂದಿದ್ರು.

ಎರಡು ದಿನಗಳ ಹಿಂದೆ ಪವನ್ ಮತ್ತು ಆತನ ಗ್ಯಾಂಗ್ ಉದಯ್ ಅವರ ಪತ್ನಿ ಮತ್ತು ಮಕ್ಕಳನ್ನ ಹೊತ್ತುಕೊಂಡು ಹೋಗಿದ್ರು. ಇದ್ರಿಂದ ಮನನೊಂದು ಉದಯ ಮನೆಯಲ್ಲಿ ಯಾರೂ ಇಲ್ಲದೆ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹಾವೇರಿ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಿರುಕುಳ ನೀಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮೃತ ಉದಯ್ ಸಂಬಂಧಿಕರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *