ಧಾರವಾಡ ನಗರದಲ್ಲಿ ಭೂಕಂಪನದ ಅನುಭವ – ರಾತ್ರಿಯಿಡೀ ಜನರಿಗೆ ಜಾಗರಣೆ

Public TV
1 Min Read

ಧಾರವಾಡ: ನಗರದ ಹಲವು ಕಡೆ ಭೂಕಂಪನದ ಅನುಭವವಾಗಿದೆ. ನಗರದ ನಾರಾಯಣಪುರ, ಕುಮಾರೇಶ್ವರನಗರ ಸೇರಿದಂತೆ 5 ಕ್ಕೂ ಹೆಚ್ಚು ಬಡಾವಣೆಯಲ್ಲಿ ಭೂಕಂಪನ ಅನುಭವದಿಂದ ಜನರು ಆತಂಕಗೊಂಡ ಘಟನೆ ನಡೆದಿದೆ.

ಶನಿವಾರ ರಾತ್ರಿ 12 ಗಂಟೆ ಸುಮಾರಿಗೆ ಭೂಮಿ ಕಂಪಿಸಿದ್ದು, ಈ ವೇಳೆ ಮನೆಯಲ್ಲಿದ್ದ ಪಾತ್ರೆಗಳು ಕೆಳಗೆ ಬಿದ್ದ ಕಾರಣ ಜನರು ಮನೆಯಿಂದ ಓಡಿ ಹೊರ ಬಂದು ನಿಂತಿದ್ದಾರೆ. ಇನ್ನು ಕೆಲವು ಕಡೆ ಮನೆಗಳು ಬಿರುಕು ಕೂಡಾ ಬಂದಿದ್ದರಿಂದ ಜನರು ಇನ್ನಷ್ಟು ಆತಂಕಪಟ್ಟಿದ್ದಾರೆ. ಆದರೆ ನಗರದ ಯಾವುದೇ ಕಡೆ ಅಹಿತಕರ ಘಟನೆ ನಡೆದಿರುವ ಬಗ್ಗೆ ವರದಿಯಾಗಿಲ್ಲ.

ಇನ್ನೇನು ಜನರು ಮಲಗಬೇಕು ಎನ್ನುವಷ್ಟರಲ್ಲಿ ಈ ರೀತಿ ಭೂಮಿ ಕಂಪಿಸಿದ ಕಾರಣ ಜನರು ಭಯಭೀತರಾಗಿದ್ರು.

Share This Article
Leave a Comment

Leave a Reply

Your email address will not be published. Required fields are marked *