ಗರ್ಭಿಣಿಯನ್ನಾಗಿಸಿ, ಮದುವೆ ಬೇಡ ಎಂದ ಪ್ರಿಯಕರ – ಪ್ರಿಯತಮೆ ಆತ್ಮಹತ್ಯೆ

Public TV
1 Min Read

ಕೊಪ್ಪಳ: ಪ್ರಿಯಕರ ಮದುವೆಯಾಗಲು ನಿರಾಕರಿಸಿದ್ದಕ್ಕೆ ಮನನೊಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಮರ್ಲಾನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪ್ರಭಾವತಿ ಆತ್ಮಹತ್ಯೆಗೆ ಶರಣಾದ ಯುವತಿಯಾಗಿದ್ದಾಳೆ.

ಪ್ರಭಾವತಿಗೆ ಅದೇ ಗ್ರಾಮದ ರವಿಕುಮಾರ ಅನ್ನೋ ಯುವಕ ನಂಬಿಸಿ ಮೋಸ ಮಾಡಿದ್ದಾನೆ. ಪ್ರಭಾವತಿ ಹಾಗೂ ರವಿಕುಮಾರ ಇಬ್ಬರು ಮರ್ಲಾನಹಳ್ಳಿ ಗ್ರಾಮದವರಾಗಿದ್ದು, ಇಬ್ಬರು ಪರಸ್ಪರ ಕಳೆದ ಮೂರು ವರ್ಷದಿಂದಲೂ ಪ್ರೀತಿ ಮಾಡುತ್ತಿದ್ರು. ಅಲ್ಲದೇ ಪ್ರಭಾವತಿ ಗರ್ಭವತಿಯಾಗಿದ್ದಳು. ಈ ಹಿನ್ನೆಲೆಯಲ್ಲಿ ಪ್ರಭಾವತಿ ಮದುವೆ ಮಾಡಿಕೋ ಅಂತ ಪ್ರೀಯಕರನನ್ನ ಕೇಳಿದ್ದಾಳೆ. ಆದ್ರೆ ಇದಕ್ಕೆ ಪ್ರಿಯಕರ ರವಿಕುಮಾರ ನಿರಾಕರಿಸಿದ್ದಾನೆ. ಇದರಿಂದ ಮನನೊಂದ ಪ್ರಭಾವತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಈ ಕುರಿತು ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *