ಕಾರವಾರ: ಹೆದ್ದಾರಿಯಲ್ಲಿ ಸ್ಫೋಟಗೊಂಡ ಸಿಲಿಂಡರ್ – ಲಾರಿ ಬೆಂಕಿಗಾಹುತಿ

1 Min Read

ಕಾರವಾರ: ಲಾರಿಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡು ಹೊತ್ತಿ ಉರಿದಿದ್ದು, ಲಾರಿ ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಯಲ್ಲಾಪುರ ತಾಲೂಕಿನ ಆರತಿ ಬೈಲ್‌ನ ಹುಬ್ಬಳ್ಳಿ-ಅಂಕೋಲ (Hubballi-Ankola) ಹೆದ್ದಾರಿಯಲ್ಲಿ ನಡೆದಿದೆ.

ಹೆದ್ದಾರಿ ರಸ್ತೆಯ ಬಾರ್ಡರ್ ಹಾಕಲು ಪೈಂಟ್‌ಗಳನ್ನು ಬಾಯ್ಲರ್ ಸಮೇತ ಹೊತ್ತು ತಂದಿದ್ದ ಲಾರಿ ಇದಾಗಿತ್ತು. ಲಾರಿಯಲ್ಲಿ ಇದ್ದ ಬಾಯ್ಲರ್ ಹೀಟ್ ಆಗಿ ಭಾರತ್ ಗ್ಯಾಸ್ ಸಿಲಿಂಡರ್‌ಗೆ ಹೊತ್ತಿಕೊಂಡು ಸ್ಫೋಟ ಸಂಭವಿಸಿದೆ. ಇದನ್ನೂ ಓದಿ: ಬೆಟಗೇರಿ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲೇ ಡಿ ಗ್ರೂಪ್‌ ನೌಕರ ಆತ್ಮಹತ್ಯೆ

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲದೇ ಲಾರಿ ಚಾಲಕ, ಸಹಚರರು ಪಾರಾಗಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಘಟನೆ ಸಂಬಂಧ ಯಲ್ಲಾಪುರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Share This Article