ದಕ್ಷಿಣ ಒಳನಾಡಿನ ನಾಲ್ಕು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಚಾಮರಾಜನಗರ, ಕೊಡಗು, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಇನ್ನುಳಿದ ಜಿಲ್ಲೆಗಳಲ್ಲಿ ಒಂಹವೆ ಮುಂದುವರಿಯಲಿದೆ ಎಂದು ಹವಾಮಾನ ವರದಿ ತಿಳಿಸಿದೆ. ಬೆಂಗಳೂರಿನಲ್ಲಿ ಜ.3ರವರೆಗೂ ಚಳಿ ಮುಂದುವರಿಯಲಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ
ಬೆಂಗಳೂರು: 27-21
ಮಂಗಳೂರು: 29-23
ಶಿವಮೊಗ್ಗ: 30-17
ಬೆಳಗಾವಿ: 27-16
ಮೈಸೂರು: 29-19
ಮಂಡ್ಯ: 29-20
ಮಡಿಕೇರಿ: 27-17
ರಾಮನಗರ: 28-21
ಹಾಸನ: 27-17
ಚಾಮರಾಜನಗರ: 29-20
ಚಿಕ್ಕಬಳ್ಳಾಪುರ: 27-19
ಕೋಲಾರ: 27-19
ತುಮಕೂರು: 27-18
ಉಡುಪಿ: 29-22
ಕಾರವಾರ: 29-21
ಚಿಕ್ಕಮಗಳೂರು: 26-17
ದಾವಣಗೆರೆ: 30-18
ಹುಬ್ಬಳ್ಳಿ: 29-17
ಚಿತ್ರದುರ್ಗ: 29-19
ಹಾವೇರಿ: 31-17
ಬಳ್ಳಾರಿ: 29-19
ಗದಗ: 28-17
ಕೊಪ್ಪಳ: 29-18
ರಾಯಚೂರು: 31-20
ಯಾದಗಿರಿ: 31-19
ವಿಜಯಪುರ: 29-18
ಬೀದರ್: 29-14
ಕಲಬುರಗಿ: 30-17
ಬಾಗಲಕೋಟೆ: 29-18






