ಧಾರವಾಡ ಕೃಷಿ ವಿವಿ 30ನೇ ಘಟಿಕೋತ್ಸವ- 13 ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ

Public TV
1 Min Read

ಧಾರವಾಡ: ಕೃಷಿ ವಿವಿಯ 30 ನೇ ಘಟಿಕೋತ್ಸವದಲ್ಲಿ ಕೇರಳ ಮೂಲದ ಜೆಮ್ಮಿ ಜೋಸೆಫ್ ಅವರು ಬಿಎಸ್‍ಸಿ ಅಗ್ರಿಕಲ್ಚರ್‍ನಲ್ಲಿ 13 ಚಿನ್ನದ ಪದಕ ಪಡೆಯುವ ಮೂಲಕ ಚಿನ್ನದ ಬೆಡಗಿ ಎನ್ನಸಿಕೊಂಡಿದ್ದಾರೆ.

ಈ ಬಾರಿ ಕೃಷಿ ವಿವಿಯಲ್ಲಿ 44 ಸಂಶೋಧಕ ವಿದ್ಯಾರ್ಥಿಗಳಿಗೆ, 265 ಸ್ನಾತಕ್ಕೋತ್ತರ ಹಾಗೂ 691 ಸ್ನಾತಕ ಪದವಿ ನೀಡಲಾಯಿತು. ಇದೇ ವೇಳೆ 82 ಚಿನ್ನದ ಪದಕ ಹಾಗೂ 8 ನಗದು ಬಹುಮಾನವನ್ನ ವಿದ್ಯಾರ್ಥಿಗಳಿಗೆ ನೀಡಲಾಯಿತು.

ಈ ಬಾರಿ ಕೇರಳ ಮೂಲದ ವಿದ್ಯಾರ್ಥಿಗಳೇ ಹೆಚ್ಚಿನ ಚಿನ್ನದ ಪದಕ ಪಡೆದು ಮೇಲುಗೈ ಸಾಧಿಸಿದ್ದಾರೆ. ಪದಕ ಪಡೆದ ಹಾಗೂ ಪದವಿ ಪಡೆದ ವಿದ್ಯಾರ್ಥಿಗಳು ಸೆಲ್ಫೀ ತೆಗೆದುಕೊಳ್ಳವ ಮೂಲಕ ಸಂಭ್ರಮಿಸಿದರು. ಇನ್ನೊಂದೆಡೆ ವಿದ್ಯಾರ್ಥಿನಿಯರು ಸೀರೆಯನ್ನುಟ್ಟುಕೊಂಡು ಬಂದಿದ್ದು ಎಲ್ಲರ ಗಮನ ಸೆಳೆಯಿತು.

ಬೆಳಗಾವಿ ಮೂಲದ ಕೇಂದ್ರ ಸರ್ಕಾರ ಕೃಷಿ ಸಹಕಾರ ಮತ್ತು ರೈತ ಕಲ್ಯಾಣ ಇಲಾಖೆಯ ಅಪರ ಕಾರ್ಯದರ್ಶಿ ಅಶೋಕ್ ದಳವಾಯಿ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಮುಖ್ಯ ಅತಿಥಿಯಾಗಿ ಇಸ್ರೋ ಅಧ್ಯಕ್ಷ ಕಿರಣ್‍ಕುಮಾರ್ ಆಗಮಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *