ಲಾರಿ ಪಲ್ಟಿ: ರಾತ್ರಿ ಬೆಳಗಾಗೋದ್ರೊಳಗೆ ಅಕ್ಕಿ ಚೀಲ ಹೊತ್ತೊಯ್ದ ಗ್ರಾಮಸ್ಥರು!

Public TV
0 Min Read

ಬೆಳಗಾವಿ: ಅಕ್ಕಿ ಚೀಲ ಹೊತ್ತೊಯ್ಯುತ್ತಿದ್ದ ಲಾರಿಯೊಂದು ಪಲ್ಟಿಯಾದ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಗುಂಡೊಳ್ಳಿ ಬಳಿ ಶುಕ್ರವಾರ ಮಧ್ಯರಾತ್ರಿ ನಡೆದಿದೆ.

ಸುಮಾರು 695 ಅಕ್ಕಿ ಚೀಲಗಳನ್ನು ತುಂಬಿದ್ದ ಲಾರಿ ಸೇತುವೆ ಬಳಿಯಿರುವ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಲಾರಿ ಪಲ್ಟಿಯಾಗಿದೆ. ಘಟನೆಯ ನಂತರ ಲಾರಿ ಚಾಲಕ ಪಾರಾಗಿದ್ದಾನೆ.

ಘಟನೆ ಬಗ್ಗೆ ಮಾಹಿತಿ ತಿಳಿದು ಸುತ್ತಮುತ್ತಲನ ಗ್ರಾಮಸ್ಥರು ರಾತ್ರಿ ಬೆಳಗಾಗುವಷ್ಟರಲ್ಲಿ ಒಂದು ಅಕ್ಕಿ ಚೀಲವನ್ನೂ ಬಿಡದೆ ಹೊತ್ತೊಯ್ದಿದ್ದಾರೆ.

ಈ ಸಂಬಂಧ ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *