ಹಳ್ಳಿ ಹುಡುಗ ಖ್ಯಾತಿಯ ಮಂಜುನಾಥ್‌ ಚೇರ್ಕಾಡಿ ಅಭಿನಯದ ಆಲ್ಬಮ್‌ ಸಾಂಗ್‌ ಮುಹೂರ್ತ

Public TV
1 Min Read

ಳ್ಳಿ ಹುಡುಗ ಖ್ಯಾತಿಯ ಮಂಜುನಾಥ್ ಚೇರ್ಕಾಡಿ ನಾಯಕ ನಟರಾಗಿ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಆಲ್ಬಮ್ ಸಾಂಗ್ ಮುಹೂರ್ತ ನಡೆದಿದೆ.

ಆರ್ ಎಸ್ ಸಾಂಗ್ಸ್ ಪ್ರೊಡಕ್ಷನ್ಸ್ ಹಾಗೂ ಆರ್ಯ ಪ್ರೊಡಕ್ಷನ್ಸ್ ಅವರ ಬಹುನಿರೀಕ್ಷಿತ ಕನ್ನಡ ಆಲ್ಬಂ ಹಾಡು ‘ಆರ್ಯ’ ಚಿತ್ರೀಕರಣ ಉಡುಪಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯಿತು. ಹಾಡಿನ ಮುಹೂರ್ತವನ್ನು ಉಡುಪಿಯ ಇತಿಹಾಸ ಪ್ರಸಿದ್ಧ ಕುಕ್ಕೆ ಹಳ್ಳಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಸಿದ ತಂಡವು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ನಮ್ಮ ಮುಹೂರ್ತಕ್ಕೆ ಬಿರುವೆರ್ ಕುಡ್ಲ ರಿ. ಉಡುಪಿ ಘಟಕದ ಅಧ್ಯಕ್ಷ ಯೋಗೀಶ್ ಪೂಜಾರಿ ಹಾಗೂ ಖ್ಯಾತ ಉದ್ಯಮಿ ರಾಜೇಶ್ ಪೂಜಾರಿ ಚಾಲನೆ ನೀಡಿದರು.

ತುಳುನಾಡ ಸಾಹಿತ್ಯ ಜೋಡಿಗಳೆಂದೇ ಖ್ಯಾತರಾಗಿರುವ ರಕ್ಷಿತ್ ಸರಿಪಲ್ಲ ನಿರ್ದೇಶನ ಹಾಗೂ ಶ್ರೇಯಸ್ ಯೆಯ್ಯಾಡಿ ಸಾಹಿತ್ಯ ಇರುವಂತಹ ಈ ಹಾಡಿಗೆ ಹಳ್ಳಿ ಹುಡುಗ ಖ್ಯಾತಿಯ ಮಂಜುನಾಥ್ ಚೇರ್ಕಾಡಿ ನಾಯಕ. ಸೋನಿ ಪ್ರಭುದನ್ ನಾಯಕಿ, ಸಹ ಕಲಾವಿದರಾಗಿ ಮೇಘ ಪೂಜಾರಿ, ವಿಶೇಷ ಪಾತ್ರದಲ್ಲಿ ಬಾಲ ನಟಿ ತನಿಷ್ಕಾ ಪೂಜಾರಿ ಅಭಿನಯಿಸುತ್ತಿದ್ದಾರೆ.

ಇನ್ನುಳಿದಂತೆ ಸಿನಿಮಾಟೋಗ್ರಾಫರ್ ಆಗಿ ಹಲವಾರು ಚಲನಚಿತ್ರಗಳಲ್ಲಿ ಕೆಲಸ ಮಾಡಿದಂತಹ ಧೀರಜ್ ಭಟ್, ಛಾಯಾಗ್ರಾಹಕರಾಗಿ ರೋಶನ್ ಉಡುಪಿ, ಸುಭಾಷ್ ಮಿಜಾರ್ ಇವರ ಸಂಗೀತವಿದೆ. ಆರ್ ಕೆ ಮುಲ್ಕಿ ಅವರ ಗಾಯನ ಹಾಡಿನಲ್ಲಿ ಕೇಳಬಹುದು.

Share This Article