ಬಿಜೆಪಿಯವರಿಗೆ ಕಾಮನ್ ಸೆನ್ಸ್ ಇಲ್ಲ, ಒಂದು ರೂಪಾಯಿ ತರುವ ಯೋಗ್ಯತೆ ಇಲ್ಲ: ಪ್ರಿಯಾಂಕ್ ಖರ್ಗೆ ಕಿಡಿ

Public TV
2 Min Read

ಬೆಂಗಳೂರು: ಬಿಜೆಪಿಯವರಿಗೆ ಕಾಮನ್ ಸೆನ್ಸ್ ಇಲ್ಲ. ದೇಶಾದ್ಯಂತ ಜನ ಉದ್ಯೋಗ ಹುಡುಕಿಕೊಂಡು ಬೆಂಗಳೂರಿಗೆ ಬರ್ತಿದ್ದಾರೆ. ಪುಣೆ, ಮುಂಬೈನಲ್ಲಿ ಸಮಸ್ಯೆಗಳು ಇಲ್ವಾ? ಲೇವಡಿ ಏಕೆ ಮಾಡ್ತಿರಾ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಖಾರವಾಗಿ ಪ್ರಶ್ನಿಸಿದ್ದಾರೆ.

ಬೆಂಗಳೂರಲ್ಲಿ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರದಿಂದ ಹತ್ತು ರೂಪಾಯಿ ಹಣ ತನ್ನಿ. ಸ್ಟೀಲ್ ಫ್ಲೈಓವರ್ ಬೇಡ ಎಂದು ರಾಜೀವ್ ಚಂದ್ರಶೇಖರ್ ಅಭಿಯಾನ ಮಾಡಿದ್ರು. ಈಗ ಕರ್ನಾಟಕದಿಂದ ಓಡಿ ಹೋಗಿದ್ದಾರೆ‌. ಕೇಂದ್ರ ಸರ್ಕಾರದಿಂದ ಒಂದು ರೂಪಾಯಿ ತರುವ ಯೋಗ್ಯತೆ ಇಲ್ಲ ಅಂತಾ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಿಎಂ ಸಾಹೇಬ್ರು ನಾಟಿ ಕೋಳಿ ತಿನ್ನಿಸ್ತಾರೆ, ಮುದ್ದೆ ಸೊಪ್ಪು ಸಾರು ಹಾಕಿದ್ರು ಓಕೆ: ಪ್ರಿಯಾಂಕ್ ಖರ್ಗೆ

32 ಕಿಲೋ‌ ಮೀಟರ್ ಡಬಲ್ ಡೆಕ್ಕರ್ ಮಾಡ್ತಿದ್ದೇವೆ.‌ ಇದೆಲ್ಲವನ್ನ ಮಾಡ್ತಿರೋದು ಟ್ರಾಫಿಕ್ ಕಂಟ್ರೋಲ್‌ಗೆ ಅಲ್ವಾ? ವಾಹನ ದಟ್ಟಣೆ ಟ್ರಾಫಿಕ್ ಎಲ್ಲವೂ ಬೆಂಗಳೂರು ಪ್ರಗತಿಯ ಜೊತೆ ಇರುತ್ತೆ ಅಲ್ವಾ? ಸಮಸ್ಯೆ ಇರೋದನ್ನ ಇದೆ ಅನ್ನೋದು ತಪ್ಪಾ. ಪರಿಹರಿಸೋದು ತಪ್ಪಾ? ಬಾಂಬೆ, ಡೆಲ್ಲಿ, ಚೆನ್ನೈ, ಪುಣೆಯಲ್ಲಿ‌ ಏನೂ ಸಮಸ್ಯೆ ಇಲ್ಲವಾ‌? ಸಮಸ್ಯೆ ಗುರುತಿಸಿ ಪರಿಹಾರ ಕೊಡಬೇಕು ಅಲ್ವಾ ಎಂದು ತಿರುಗೇಟು ನೀಡಿದ್ದಾರೆ.

ಶಾಸಕ ವೀರೇಂದ್ರ ಪಪ್ಪಿಯಿಂದ ಬಿಹಾರ ಎಲೆಕ್ಷನ್‌ಗೆ ಹಣ ಕಲೆಕ್ಷನ್ ನಡೆಯುತ್ತಿತ್ತು ಎಂಬ ಬಿಜೆಪಿ-ಜೆಡಿಎಸ್ ಆರೋಪ ವಿಚಾರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ಅಶೋಕ್ 100 ಕೋಟಿ ಕೊಟ್ಟಿದ್ದಾರೆ. ಇದನ್ನ ನೀವು ಹಾಕ್ತೀರಾ? ವಿಜಯೇಂದ್ರ ದುಬೈಗೆ ಹೋಗಿ ಬರ್ತಾರೆ. ವಿಜಯೇಂದ್ರ, ಅಮಿತ್ ಶಾಗೆ ಬಿಟ್‌ಕಾಯಿನ್ ಕೊಟ್ಟಿದ್ದಾರೆ ಅಂದ್ರೆ ನೀವು ನಂಬುತ್ತೀರಾ? ಸಿಎಂ ಆಗಿ ಬರಬೇಕು ಅಂದ್ರೆ ಸುಮ್ಮನೇನಾ? ಕಪ್ಪ ಕೊಡಬೇಕು ಅಂತ ಯಡಿಯೂರಪ್ಪ ಅನಂತ್ ಕುಮಾರ್ ಕಿವಿಯಲ್ಲಿ ಹೇಳಿಲ್ವಾ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಜೊತೆಗಿನ ಫೋಟೊ ಶೇರ್ – ರಾಜಕೀಯ ಎಂಟ್ರಿಗೆ ಸಿದ್ದರಾಮಯ್ಯ ಮೊಮ್ಮಗ ಸಿದ್ಧತೆ?

ಆರ್.ಅಶೋಕ್, ವಿಜಯೇಂದ್ರ ದುಡ್ಡು ಕೊಟ್ಟು ಅವರ ಸ್ಥಾನ ಉಳಿಸಿಕೊಂಡಿದ್ದಾರೆ. ನಾನೂ ಈ ರೀತಿ ಹೇಳಬಹುದು ಅಲ್ವಾ? ಇದು ಅವರ ಪಾರ್ಟಿ ವಿಚಾರ‌. ಇಡಿ ಯಾರ ಕೈಯಲ್ಲಿ ಇದೆ? ಕೇಂದ್ರದ ಕೈಯಲ್ಲಿ ಅಲ್ವಾ? ಅಮಿತ್‌ ಶಾರಿಂದ ದಾಖಲೆ ತರಿಸಲಿ. ಸುಮ್ಮನೆ ಚಪಲಕ್ಕೆ ಮಾತಾಡುವುದಲ್ಲ. ಗಾಳಿಯಲ್ಲಿ ಗುಂಡು ಹೊಡೆಯುವುದಲ್ಲ ಎಂದು ಕಿಡಿಕಾರಿದ್ದಾರೆ.

Share This Article