ಬೆಂಗಳೂರು: ಸೋಮವಾರ (ಅ.6) ಬೆಳಗ್ಗೆ ಯಶವಂತಪುರ ಮೆಟ್ರೋ ಸ್ಟೇಷನ್ನಲ್ಲಿ (Yeshwanthpur Metro Station) ಉಂಟಾದ ಭಾರೀ ಜನದಟ್ಟಣೆಯಿಂದಾಗಿ ಅರ್ಧಗಂಟೆಗಳ ಕಾಲ ನಿಲ್ದಾಣವನ್ನು ಬಂದ್ ಮಾಡಲಾಗಿತ್ತು.
ಆಯುಧ ಪೂಜೆ, ದಸರಾ ಸೇರಿ ಸಾಲು ಸಾಲು ರಜೆ ಬಳಿಕ ಜನರು ಬೆಂಗಳೂರಿನತ್ತ ಮರಳುತ್ತಿದ್ದು, ಈ ಹಿನ್ನೆಲೆ ಇಂದು ಬೆಳಗ್ಗೆ ಯಶವಂತಪುರ ಮೆಟ್ರೋ ನಿಲ್ದಾಣದ ಬಳಿ ಭಾರೀ ಜನದಟ್ಟಣೆ ಉಂಟಾಗಿತ್ತು. ಹೀಗಾಗಿ ಪ್ರಯಾಣಿಕರ ದಟ್ಟಣೆ ನಿಯಂತ್ರಿಸುವ ದೃಷ್ಟಿಯಿಂದ ಬೆಳಗ್ಗೆ 8:50 ರಿಂದ 9:15ರವರೆಗೆ ನಿಲ್ದಾಣದ ಬಾಗಿಲನ್ನು ಮುಚ್ಚಲಾಗಿತ್ತು.ಇದನ್ನೂ ಓದಿ: ಜೈಪುರ ಆಸ್ಪತ್ರೆಯ ಐಸಿಯುನಲ್ಲಿ ಬೆಂಕಿ ಅವಘಡ – 6 ರೋಗಿಗಳು ಸಜೀವ ದಹನ
ಈ ಕುರಿತು ಬಿಎಂಆರ್ಸಿಎಲ್ (BMRCL) ಮಾಹಿತಿ ನೀಡಿದ್ದು, 9:15ರ ಬಳಿಕ ಯಶವಂತಪುರ ಮೆಟ್ರೋ ನಿಲ್ದಾಣದ ಬಾಗಿಲು ತೆರೆಯಲಾಗಿದೆ. ಸದ್ಯ ಎಂದಿನಂತೆ ಮೆಟ್ರೋ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ.