ಸಿದ್ದರಾಮಯ್ಯ ಮೊದಲಿನಂತಿಲ್ಲ, ಹೇಳಲಾಗದ ಒತ್ತಡ ಇದೆ: ರಾಜಣ್ಣ ಬಾಂಬ್

Public TV
1 Min Read

ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ, ಪವರ್ ಶೇರಿಂಗ್ ಚರ್ಚೆ ಆಗಿಲ್ಲ. ಪಕ್ಷದ ಯಾರೂ ಈ ಬಗ್ಗೆ ಮಾತಾಡುವಂತಿಲ್ಲ ಅಂತ ಹೈಕಮಾಂಡ್ ನಾಯಕರು ಹೇಳಿದರೂ ರಾಜ್ಯ ನಾಯಕರ ವ್ಯಾಖ್ಯಾನಗಳು ಮುಂದುವರಿದಿವೆ.

2013-18ರ ಸಿದ್ದರಾಮಯ್ಯ ಬೇರೆ.. ಇವಾಗಿನ ಸಿದ್ದರಾಮಯ್ಯ ಬೇರೆ. ಆಗ ಪಾದರಸದಂತೆ ಕೆಲಸ ಇರೋದು. ಈಗ ಅವರಿಗೆ ಬೇರೆ ಬೇರೆ ರೀತಿಯ ಒತ್ತಡ ಇದೆ. ಕೆಲವು ಹೇಳಲಾಗದೇ ಇರುವಂತಹ ಒತ್ತಡ ಇದೆ ಅಂದಿದ್ದಾರೆ. ಜೊತೆಗೆ, ನವೆಂಬರ್‌ನಲ್ಲಿ ಯಾವುದೇ ಬದಲಾವಣೆ ಆಗಲ್ಲ ಅಂದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ 1.2 ಕೋಟಿ ಮನೆಗಳ ಸಮೀಕ್ಷೆ ಮುಕ್ತಾಯ – ಬೆಂಗಳೂರಲ್ಲಿ ಜಾತಿ ಜನಗಣತಿ ಮೊದಲ ದಿನವೇ ಗೊಂದಲ

ಸಚಿವ ಜಮೀರ್ ಮಾತಾಡಿ, ನವೆಂಬರ್‌ಗೆ ಯಾವ ಕ್ರಾಂತಿ ಇಲ್ಲ, 5 ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರ್ತಾರೆ ಅಂದಿದ್ದಾರೆ. ಅದಾಗ್ಯೂ, ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಅಂತ ಬಯಸುತ್ತೇನೆ ಅಂತಲೂ ಹೇಳಿದ್ದಾರೆ.

ಈ ಮಧ್ಯೆ, ಸಿದ್ದರಾಮಯ್ಯನವರೇ 5 ವರ್ಷವೂ ಸಿಎಂ ಆಗಿರ್ತಾರೆ ಅಂತ ಸಚಿವ ಮಹದೇವಪ್ಪ ಹಾಗೂ ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿರೊ ಇಸ್ರೇಲ್ ರಾಯಭಾರ ಕಚೇರಿ, ಹೈಕೋರ್ಟ್‌ಗೆ RDX ಇಟ್ಟಿರೋದಾಗಿ ಇ-ಮೇಲ್‌ ಬೆದರಿಕೆ

Share This Article