ಎಲ್ಲೆಡೆ ನಾಡಹಬ್ಬ ದಸರಾ (Dasara) ಸಂಭ್ರಮ ಮನೆ ಮಾಡಿದೆ. ಈ ಸಂಭ್ರಮದ ವೇಳೆ ದುರ್ಗಾ ದೇವಿಗೆ ಇಷ್ಟವಾಗುವ ನೈವೇದ್ಯವನ್ನು ಮಾಡಿ ಸಮರ್ಪಿಸುವುದರಿಂದ ತಾಯಿ ಸಂತೃಪ್ತಳಾಗುತ್ತಾಳೆ. ಹಾಗಾದರೆ ದೇವಿಗೆ ಇಷ್ಟವಾದ ನೈವೇದ್ಯ ಯಾವುದು ಎಂದರೆ ಅದು ಕ್ಷೀರಾನ್ನ. ಇದನ್ನು ತಯಾರಿಸುವುದು ಹೇಗೆ ಎಂದು ತಿಳಿಯೋಣ.
ಬೇಕಾಗುವ ಪದಾರ್ಥಗಳು:
*ಅಕ್ಕಿ
* ಹಾಲು – 1 ಲೀಟರ್
* ಕಲ್ಲು ಸಕ್ಕರೆ – 1 ಕಪ್
* ಏಲಕ್ಕಿ – 4 (ಪುಡಿಮಾಡಿ)
* ತುಪ್ಪ – 1/2 ಕಪ್
* ಗೋಡಂಬಿ – 20 ರಿಂದ 25
* ಒಣದ್ರಾಕ್ಷಿ – 2 ಟೀಸ್ಪೂನ್
ಮಾಡುವ ವಿಧಾನ
ಕ್ಷೀರಾನ್ನ ಮಾಡಲು ಮೊದಲು ಅಕ್ಕಿ ಅಥವಾ ಸಣ್ಣಕ್ಕಿಯನ್ನು ತೆಗೆದುಕೊಂಡು, ಅದನ್ನು ತೊಳೆದು ಕುಕ್ಕರ್ ಅಥವಾ ಸಣ್ಣ ಪಾತ್ರೆಯಲ್ಲಿ ಬೇಯಿಸಿಕೊಳ್ಳಬೇಕು. ಅನ್ನ ಶಾವಿಗೆಯ ಹದಕ್ಕೆ ಮೆತ್ತಗಾದಾಗ ಒಂದು ಬಾಣಲೆಗೆ ಅದನ್ನು ಸುರಿದುಕೊಂಡು, ಅನ್ನಕ್ಕೆ ಸರಿ ಪ್ರಮಾಣದಲ್ಲಿ ಸಕ್ಕರೆ ಅಥವಾ ಬೆಲ್ಲ ಹಾಕಿ ಅದು ಪಾಕ ಬಿಡುವವರೆಗೂ ಹುರಿದುಕೊಳ್ಳಬೇಕು. ನಂತರ ತುಪ್ಪವನ್ನು ಹಾಕಿ ಸರಿಯಾಗಿ ಮಿಶ್ರಣ ಕಲಿಸಿಕೊಳ್ಳಬೇಕು. ಅಗತ್ಯವಿದ್ದರೆ ಹೆಚ್ಚು ಹಾಲು ಸೇರಿಸಿ ಕುದಿಸಬೇಕು.
ಕ್ಷೀರಾನ್ನದ ಮಹತ್ವ
ಶುದ್ಧತೆ ಮತ್ತು ಭಕ್ತಿ: ಹಾಲು ಮತ್ತು ಅಕ್ಕಿಯಂತಹ ಶುದ್ಧ ಪದಾರ್ಥಗಳನ್ನು ಬಳಸುವುದರಿಂದ, ಕ್ಷೀರಾನ್ನ ದೇವರಿಗೆ ಸಲ್ಲಿಸುವ ಶುದ್ಧತೆ ಮತ್ತು ಭಕ್ತಿಯನ್ನು ಪ್ರತಿನಿಧಿಸುತ್ತದೆ.