ಅಗ್ನಿ ಅವಘಡಕ್ಕೆ ಗುಡಿಸಲು ಭಸ್ಮ: ಲಕ್ಷಾಂತರ ರೂ. ನಷ್ಟದಿಂದ ಮನೆಮಂದಿ ಕಂಗಾಲು

Public TV
0 Min Read

ರಾಯಚೂರು: ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ನಲ್ಲಿ ಆಕಸ್ಮಿಕ ಬೆಂಕಿ ತಗುಲಿ ಗುಡಿಸಲು ಭಸ್ಮವಾಗಿದೆ.

ದವಲಮ್ಮ ಎನ್ನುವವರ ಗುಡಿಸಲಿಗೆ ಬೆಂಕಿ ಬಿದ್ದಿದ್ದು ಲಕ್ಷಾಂತರ ರೂಪಾಯಿ ವಸ್ತುಗಳು ಸುಟ್ಟು ಭಸ್ಮವಾಗಿವೆ. ಗುಡಿಸಲಿನಲ್ಲಿದ್ದ 2 ಲಕ್ಷ ರೂಪಾಯಿ ನಗದು, 50 ಗ್ರಾಂ ಚಿನ್ನ, 30 ಗ್ರಾಂ ಬೆಳ್ಳಿ, ಐದು ಚೀಲ ಸಜ್ಜೆ ಹಾಗೂ ಬಟ್ಟೆ ಭಸ್ಮವಾಗಿವೆ.

ಘಟನೆ ಹಿನ್ನೆಲೆ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *