ಕೊಪ್ಪಳ ಆಸ್ಪತ್ರೆಯಲ್ಲಿ ಬಾಲಕಿ ಸಾವು: ವೈದ್ಯರ ವಿರುದ್ಧ ಪೋಷಕರು ಆರೋಪ

Public TV
1 Min Read

ಕೊಪ್ಪಳ: ಮೂರು ವರ್ಷದ ಮಗುವೊಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿರುವುದಾಗಿ ಬಾಲಕಿಯ ಪೋಷಕರು ಆರೋಪಿಸುತ್ತಿದ್ದಾರೆ.

ಮೃತ ಬಾಲಕಿಯನ್ನು ಕಲ್ಗುಡಿ ಗ್ರಾಮದ ಅಮೃತಾ ಎಂದು ಗುರುತಿಸಲಾಗಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಬಾಲಕಿಯನ್ನು ಶುಕ್ರವಾರ ಬೆಳಗ್ಗೆ ಪೋಷಕರು ಗಂಗಾವತಿಯ ಕನಕಗಿರಿ ರಸ್ತೆಯಲ್ಲಿನ ಡಾ ಎಸ್ ಜಿ ಮಟ್ಟಿಗೆ ಸೇರಿದ ತೇಜಸ್ವಿನಿ ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಂತೆಯೇ ಬಾಲಕಿಯನ್ನು ಪರೀಕ್ಷಿಸಿರುವ ವೈದ್ಯ ರಕ್ತದ ಕೊರತೆ ಇದ್ದು, ರಕ್ತ ಹಾಕಬೇಕು ಎಂದು ಹೇಳಿದ್ರು. ಆದ್ರೆ, ಸೂಕ್ತ ಸಮಯದಲ್ಲಿ ರಕ್ತ ನೀಡದಿರುವುದೇ ಸಾವಿಗೆ ಕಾರಣವಾಗಿದೆ. ವೈದ್ಯರು ಹೇಳುತ್ತಿದ್ದಂತಯೇ ರಕ್ತ ತಂದರೂ ಹಾಕಿಲ್ಲ ಎಂದು ಬಾಲಕಿ ಕುಟುಂಬ ಆಸ್ಪತ್ರೆ ಮುಂದೆ ನಿನ್ನೆ ರಾತ್ರಿ ಇಡೀ ಪ್ರತಿಭಟನೆ ನಡೆಸಿದೆ. ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಯಾವುದೇ ಕಾರಣಕ್ಕೂ ಪ್ರತಿಭಟನೆ ಕೈ ಬಿಡಲ್ಲ ಅಂತಾ ಪಟ್ಟು ಹಿಡಿದಿದ್ರು.

ಗಂಗಾವತಿ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನಿಸಿ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *