ಜಯಂತ್ ಗಾಂಜಾ ಮಾರಾಟ ಮಾಡ್ತಿದ್ರು: ಮಹಿಳೆ ಆರೋಪ

By
2 Min Read

ಬೆಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣದ ಎರಡನೇ ದೂರುದಾರ ಜಯಂತ್ (Jayanth) ಗಾಂಜಾ (Ganja) ಮಾರಾಟ ಮಾಡುತ್ತಿದ್ದರು ಎಂದು ಸ್ಥಳೀಯ ನಿವಾಸಿ ಮಹಾಲಕ್ಷ್ಮಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಜಯಂತ್ ಮನೆಯ ಬಳಿಯ ನಿವಾಸಿಯಾಗಿರುವ ಮಹಾಲಕ್ಷ್ಮಿ ಜಯಂತ್ ವಿರುದ್ಧ ಗಾಂಜಾ ಮಾರಾಟದ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಚಿನ್ನಯ್ಯ ಅನ್ನೋರು ಜಯಂತ್ ಮನೆಯಲ್ಲಿ ಇದ್ದದ್ದು ನಿಜ. ನಾನು ಕೂಡ ಅದೇ ಬಿಲ್ಡಿಂಗ್‌ನಲ್ಲಿ ಬಾಡಿಗೆಗೆ ಇದ್ದೆ. ಈ ವೇಳೆ ಜಯಂತ್ ಮನೆಗೆ ಸುಮಾರು ಜನ ಬಂದು ಹೋಗುತ್ತಿದ್ದರು. ಕಳೆದ ಒಂದೂವರೆ ವರ್ಷದಿಂದ ಕೂಡ ಚಿನ್ನಯ್ಯ ಇಲ್ಲಿಗೆ ಬಂದು ಹೋಗುತ್ತಿದ್ದರು ಎಂದರು. ಇದನ್ನೂ ಓದಿ: ಸೂಕ್ತ ಸಂದೇಶ ನೀಡಲು ಭಾರತ ಸಿದ್ಧ – ಚೀನಾದಲ್ಲಿ ಪುಟಿನ್ ಭೇಟಿಗೂ ಮುನ್ನ ಪ್ರಧಾನಿ ಮೋದಿಗೆ ಜೆಲೆನ್ಸ್ಕಿ ಕರೆ

ಚಿನ್ನಯ್ಯನನ್ನ ಟಿವಿಯಲ್ಲಿ ನೋಡಿದಾಗ ನನಗೆ ಗೊತ್ತಾಯ್ತು. ಚಿನ್ನಯ್ಯ ಇಲ್ಲಿ ಬಂದು ಹೋಗುತ್ತಿದ್ದನ್ನು ನಾನೇ ನೋಡಿದ್ದೇನೆ. ಅವರ ಮನೆಯಲ್ಲಿ ಗಾಂಜಾ ಮಾರಾಟ ಮಾಡುತ್ತಾರೆ ಅಂತಾ ಅನುಮಾನ ಇತ್ತು.ಈ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದೆ. ಇದೇ ವಿಚಾರ ಸಂಬಂಧ ಗಲಾಟೆ ಆಗಿ ನಾನು ಬೇರೆ ಕಡೆಗೆ ಶಿಫ್ಟ್ ಆದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದಸರಾ ದಂಗಲ್ – ಮೌನ ಮುರಿದ ರಾಜವಂಶಸ್ಥೆ ಪ್ರಮೋದಾ ದೇವಿ

ಚಿನ್ನಯ್ಯ ತಂದಿದ್ದ ಬುರುಡೆ ಪ್ರಕರಣಕ್ಕೆ ಈಗ ಬೆಂಗಳೂರು ನಂಟು ತಳುಕುಹಾಕಿಕೊಂಡಿದೆ. ಧರ್ಮಸ್ಥಳ ವಿರುದ್ಧ ಮಹಾ ಷಡ್ಯಂತ್ರಕ್ಕೆ ಬೆಂಗಳೂರಿನಲ್ಲೇ ಸ್ಕೆಚ್ ನಡೆದಿರೋದು ಬೆಳಕಿಗೆ ಬಂದಿದೆ. ಎಸ್‌ಐಟಿ ವಿಚಾರಣೆ ವೇಳೆ ಚಿನ್ನಯ್ಯ ಜಯಂತ್ ಹೆಸರು ಬಾಯ್ಬಿಟ್ಟಿದ್ದಾನೆ. ಚಿನ್ನಯ್ಯನ ಹೇಳಿಕೆ ಆಧರಿಸಿ ಬೆಂಗಳೂರಿನ ಮಲ್ಲಸಂದ್ರದಲ್ಲಿರೋ ಜಯಂತ್ ಮನೆ ಮೇಲೆ ದಾಳಿ ನಡೆಸಿ, ಮಹಜರು ನಡೆಸಿದ್ದಾರೆ. ಇದನ್ನೂ ಓದಿ: ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಾಗಿ ಎಂ.ಎ ಸಲೀಂ ನೇಮಕ

ಜಯಂತ್ ಕಳೆದ 7-8 ವರ್ಷದಿಂದ ಇಬ್ಬರು ಮಕ್ಕಳು, ಹೆಂಡತಿಯೊಂದಿಗೆ ಮಲ್ಲಸಂದ್ರದಲ್ಲಿ ವಾಸವಾಗಿದ್ದಾರೆ. ಐದಾರು ವರ್ಷಗಳಿಂದ ಮಲ್ಲಸಂದ್ರ ರಸ್ತೆಯಲ್ಲಿ ನಿಸರ್ಗ ನಿಧಿ ಕೊಬ್ಬರಿ ಎಣ್ಣೆ ಅಂಗಡಿ ನಡೆಸುತ್ತಿದ್ದಾರಂತೆ. ಇನ್ನು ಸ್ಥಳೀಯರು ಹೇಳುವ ಪ್ರಕಾರ, ಸ್ಥಳೀಯ ವಾಟ್ಸಪ್ ಗ್ರೂಪ್‌ಗಳಲ್ಲಿ ಧರ್ಮಸ್ಥಳ ವಿರುದ್ಧ ಕೆಲ ಪೋಸ್ಟ್ ಮಾಡ್ತಿದ್ರು. ಪ್ರಶ್ನೆ ಮಾಡಿದ್ದಕ್ಕೆ ನಂತರ ಪೋಸ್ಟ್ ಹಾಕೋದನ್ನು ಜಯಂತ್ ಬಿಟ್ಟಿದ್ರು. ಆಮೇಲೆ ಸ್ವಲ್ಪ ದಿನ ಜಯಂತ್ ಅವರು ನಮಗೆ ಕಾಣಲಿಲ್ಲ. ಬುರುಡೆ ಕೇಸಲ್ಲಿ ಜಯಂತ್ ಹೆಸರು ಕೇಳಿ ನಮಗೆ ಆಶ್ಚರ್ಯವಾಗಿದೆ ಅಂತಿದ್ದಾರೆ. ಇದನ್ನೂ ಓದಿ: ಬುರುಡೆ ಕೇಸ್‌ಗೆ ಬೆಂಗಳೂರು ಲಿಂಕ್ – ಚಿನ್ನಯ್ಯ ನನ್ನ ಮನೆಯಲ್ಲಿದ್ದ, ತಲೆಬುರುಡೆ ತಂದಿದ್ದ; ʻಪಬ್ಲಿಕ್ ಟಿವಿʼಗೆ ಜಯಂತ್ ಸ್ಫೋಟಕ ಹೇಳಿಕೆ

Share This Article