ಸ್ವಚ್ಛ ಬಳ್ಳಾರಿ ಅಭಿಯಾನಕ್ಕೆ 6 ಲಕ್ಷ ರೂ. ದೇಣಿಗೆ ನೀಡಿದ ರಾಜಮೌಳಿ

Public TV
1 Min Read

ಬಳ್ಳಾರಿ: ಸ್ವಚ್ಛ, ಸ್ವಸ್ಥ ಮತ್ತು ಸುಂದರ ಬಳ್ಳಾರಿ ನಿರ್ಮಾಣದ ಮಹತ್ತರ ಉದ್ದೇಶದೊಂದಿಗೆ ಜಿಲ್ಲಾಡಳಿತ ಆರಂಭಿಸಿರುವ ಸ್ವಚ್ಛ ಬಳ್ಳಾರಿ ಅಭಿಯಾನಕ್ಕೆ ಎಲ್ಲೆಡೆಯಿಂದ ಸಕರಾತ್ಮಕ ಬೆಂಬಲ ದೊರೆಯುತ್ತಿದ್ದು, ಈ ಅಭಿಯಾನಕ್ಕೆ ಈಗ ಸ್ವಂತ ಬಾಹುಬಲಿ ನಿರ್ದೇಶಕ ರಾಜಮೌಳಿ ಕೈ ಜೋಡಿಸಿದ್ದಾರೆ.

ಶನಿವಾರ ಬಾಹುಬಲಿ ಚಿತ್ರ ವೀಕ್ಷಣೆಗೆ ಆಗಮಿಸಿದ್ದ ರಾಜಮೌಳಿ ಸ್ವಚ್ಛ ಬಳ್ಳಾರಿ ಅಭಿಯಾನಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಸ್ವಚ್ಛ ಬಳ್ಳಾರಿ ಅಭಿಯಾನಕ್ಕೆ ರಾಧಿಕಾ ಚಿತ್ರಮಂದಿರದ ಸಹ ಮಾಲೀಕ ಸಾಯಿರೊಂದಿಗೆ ಜೊತೆಗೂಡಿ ನಿರ್ದೇಶಕ ರಾಜಮೌಳಿ 6 ಲಕ್ಷ ರೂ. ಮೌಲ್ಯದ ಚೆಕ್ ಅನ್ನು ಜಿಲ್ಲಾಧಿಕಾರಿ ರಾಮಪ್ರಸಾತ ಮನೋಹರ್ ಗೆ ಹಸ್ತಾಂತರಿಸಿದರು.

ಜಿಲ್ಲಾಡಳಿತ ಆರಂಭಿಸಿರುವ ಸ್ವಚ್ಛ ಬಳ್ಳಾರಿ ಅಭಿಯಾನಕ್ಕೆ ಈಗಾಗಲೇ ಹಲವಾರು ಜನರು ಧನ ಸಹಾಯ ಮಾಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ತಿಳಿಸಿದರು.

ಇದನ್ನೂ ಓದಿ: ಬಳ್ಳಾರಿಯಲ್ಲಿ ಬಾಹುಬಲಿ ಚಿತ್ರ ವೀಕ್ಷಿಸಿದ ರಾಜಮೌಳಿ. ಡಬ್ಬಿಂಗ್ ಬಗ್ಗೆ ಹೇಳಿದ್ದು ಏನು?

Share This Article
Leave a Comment

Leave a Reply

Your email address will not be published. Required fields are marked *