ಕರ್ತವ್ಯ ನಿರತ ಸರ್ಕಾರಿ ಬಸ್ ಚಾಲಕನಿಗೆ ಹೃದಯಘಾತವಾಗಿ ಸಾವು!

Public TV
0 Min Read

ಕೊಪ್ಪಳ: ಕರ್ತವ್ಯ ನಿರತ ಸರ್ಕಾರಿ ಬಸ್ ಚಾಲಕರೊಬ್ಬರು ಹೃದಯಘಾತದಿಂದ ಸಾವಿಗೀಡಾಗಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಕುಷ್ಟಗಿ ಬಸ್ ಡಿಪೋದಲ್ಲಿ ಈ ಘಟನೆ ನಡೆದಿದೆ. 45 ವರ್ಷದ ಕಿರಣ್ ಕುಮಾರ ಯಾದಗಿರಿ ಮೃತ ಚಾಲಕ. ಇವರು ಬಾಗಲಕೋಟೆ ಮೂಲದವರು ಅಂತ ತಿಳಿದುಬಂದಿದೆ.

ಕುಷ್ಟಗಿ ಡಿಪೋದಲ್ಲಿ ಬಸ್ ನಿಲ್ಲಿಸಿ ವಿಶ್ರಾಂತಿಗೆ ತೆರಳುವಾಗ ಕಿರಣ್ ಅವರಿಗೆ ಹೃದಯಾಘಾತವಾಗಿದೆ. ಕುಷ್ಟಗಿ- ಬೆಂಗಳೂರು ಬಸ್ ಚಾಲಕರಾಗಿರೋ ಇವರು ಬೆಂಗಳೂರಿನಿಂದ ಕುಷ್ಟಗಿ ಡ್ಯೂಟಿ ಮುಗಿಸಿದ ಬಳಿಕ ಹೃದಯಾಘಾತವಾಗಿದೆ. ಕಿರಣ್ ಅವರ ಸಾವಿನ ಸುದ್ದಿ ತಿಳಿದ ಚಾಲಕರು ಹಾಗೂ ನಿರ್ವಾಹಕರು ಮಮ್ಮಲ ಮರುಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *