ಮೋದಿ ಭಾಷಣ ಮುಕ್ತಾಯ
ವೇದಿಕ ಕಾರ್ಯಕ್ರಮದಿಂದ ತೆರಳಿದ ಪ್ರಧಾನಿ
ಮೋದಿ ಹೇಳಿಕೆ..
ಭಾರತ ಜಗತ್ತಿನ ಮೂರನೇ ದೊಡ್ಡ ಮೆಟ್ರೋ ಸಂಪರ್ಕ ಇರೋ ದೇಶ
2014 ವರೆಗೆ 74 ಏರ್ಪೋರ್ಟ್ಗಳಿದ್ದವು, ಈಗ 160 ಇವೆ
ಮೋದಿ ಮಾತು..
ಹಳದಿ ಹಾಗೂ ಕಿತ್ತಳೆ ಮೆಟ್ರೋ ಮಾರ್ಗಗಳು ಬೆಂಗಳೂರು ಸಂಚಾರಕ್ಕೆ ದೊಡ್ಡ ಬಲ
ಎರಡೂ ಮಾರ್ಗಗಳಿಂದ 25 ಲಕ್ಷ ಪ್ರಯಾಣಿಕರಿಗೆ ಅನುಕೂಲ ಆಗಲಿದೆ
ಆಪರೇಷನ್ ಸಿಂಧೂರದ ಸಫಲತೆ ಹಿಂದೆ ಮೇಕ್ ಇನ್ ಇಂಡಿಯಾದ ಶಕ್ತಿ ಇದೆ
ಇದರಲ್ಲಿ ಬೆಂಗಳೂರು ಹಾಗೂ ಇಲ್ಲಿನ ಯುವ ತಂತ್ರಜ್ಞರ ಯೋಗದಾನವೂ ಇದೆ: ಮೋದಿ ಹೇಳಿಕೆ
ಮೋದಿ ಭಾಷಣ..
ಬೆಂಗಳೂರು ನ್ಯೂ ಇಂಡಿಯಾದ ಪ್ರಗತಿಯ ಸಂಕೇತ
ಈ ನಗರ ಗ್ಲೋಬಲ್ ಐಟಿಯಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದೆ
ಬೆಂಗಳೂರು ಯಶಸ್ಸಿಗೆ ಇಲ್ಲಿನ ಜನರ ಶ್ರಮ, ಪ್ರತಿಭೆ ಕಾರಣ
ಬೆಂಗಳೂರಿನಂಥ ನಗರಗಳನ್ನು ಭವಿಷ್ಯಕ್ಕಾಗಿ ರೂಪಿಸಬೇಕು
ಅದಕ್ಕಾಗಿ ಕೇಂದ್ರದ ಅನುದಾನ ಹರಿದು ಬರ್ತಿದೆ
ಇಂದು ಮೆಟ್ರೋ ಹಳದಿ ಮಾರ್ಗ, ಮೂರು ವಂದೇ ಭಾರತ್ ರೈಲುಗಳಿಗೆ ಚಾಲನೆ ಕೊಡಲಾಗಿದೆ
ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ
ಬೆಂಗಳೂರು ನಗರದ ಆತ್ಮೀಯ ನಾಗರಿಕ ಬಂಧು-ಭಗಿನಿಯರೇ, ನಿಮಗೆಲ್ಲ ನನ್ನ ನಮಸ್ಕಾರಗಳು ಅಂತ ಕನ್ನಡದಲ್ಲೇ ಹೇಳಿದ ಪ್ರಧಾನಿ
3ನೇ ಹಂತದ ಮೆಟ್ರೋ ಮಾರ್ಗಕ್ಕೆ ಮೋದಿ ಶಂಕುಸ್ಥಾಪನೆ
ಮೋದಿ ಭಾಷಣಕ್ಕೂ ಮುನ್ನ ಕಿರು ವಿಡಿಯೋ ಪ್ರಸಾರ
ನಮ್ಮ ಮೆಟ್ರೋಗೆ ರಾಜ್ಯದ ಪಾಲು ಹೆಚ್ಚು: ಸಿಎಂ
ಪ್ರಧಾನಿ ಮೋದಿ ಎದುರು ಕ್ರೆಡಿಟ್ ತಗೊಂಡ ಸಿಎಂ ಸಿದ್ದರಾಮಯ್ಯ
ಈಗಾಗಲೇ 96.10 ಕಿ.ಮೀ ಮೆಟ್ರೋ ರೈಲು ಕೆಲಸ ಮುಗಿದಿದೆ
ಇದಕ್ಕೆ ರಾಜ್ಯ 25,387 ಕೋಟಿ ರೂ ಕರ್ಚು ಮಾಡಿದೆ
ಕೇಂದ್ರ 7,468.86 ಕೋಟಿ ಕರ್ಚು ಮಾಡಿದೆ
ಹಳದಿ ಮಾರ್ಗಕ್ಕೆ 7,160 ಕೋಟಿ ಖರ್ಚಾಗಿದೆ ಎಂದ ಸಿಎಂ
ಕಾರ್ಯಕ್ರಮದಲ್ಲಿ ಮೋದಿ-ಡಿಕೆಶಿ ಟಾಕ್
ಮೋದಿಯವರ ಪಕ್ಕ ಕೂತು ಕಿವಿಯಲ್ಲಿ ಮಾತಾಡಿದ ಡಿಕೆಶಿ
ಸಿಎಂ ಭಾಷಣಕ್ಕೆ ಎದ್ದು ಹೋದ ಬೆನ್ನಲ್ಲೇ ಮೋದಿ ಪಕ್ಕ ಬಂದು ಕೂತು ಮಾತಾಡಿದ ಡಿಕೆಶಿ
ವೇದಿಕೆ ಮೇಲೆ ಅಕ್ಕಪಕ್ಕ ಕೂತ ಸಿದ್ದರಾಮಯ್ಯ ಮತ್ತು ಹೆಚ್ಡಿಕೆ
ಪಂಚಮುಖಿ ಗಣೇಶ ಮೂರ್ತಿ ನೀಡಿ ಮೋದಿಯವರಿಗೆ ಸನ್ಮಾನ
ವೇದಿಕೆಯಲ್ಲಿ ಪ್ರಧಾನಿಯವರ ಜೊತೆ 13 ಗಣ್ಯರಿಗೆ ಸ್ಥಾನ
ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್
ಕೇಂದ್ರ ಸಚಿವ ಮನೋಹರ ಲಾಲ್
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಕೇಂದ್ರದ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ
ಕೇಂದ್ರದ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ
ಸಿಎಂ ಸಿದ್ದರಾಮಯ್ಯ
ಡಿಸಿಎಂ ಡಿಕೆ ಶಿವಕುಮಾರ್
ಸಂಸದ ತೇಜಸ್ವಿ ಸೂರ್ಯ
ಸಚಿವ ಬೈರತಿ ಸುರೇಶ್
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ
ವಿಪಕ್ಷ ನಾಯಕ ಆರ್.ಅಶೋಕ್
ಸಂಸದ ಡಾ.ಸಿ.ಎನ್.ಮಂಜುನಾಥ್
ರಾಷ್ಟ್ರಗೀತೆ, ನಾಡಗೀತೆ ಗಾಯನ ಬಳಿಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ
ಐಐಐಟಿ ಕಾರ್ಯಕ್ರಮದಲ್ಲಿ ಮೋದಿ.. ಮೋದಿ ಜಯಘೋಷ
ಐಐಐಟಿಗೆ ಇನ್ಫೋಸಿಸ್ನ ಸುಧಾಮೂರ್ತಿ, ನಾರಾಯಣ ಮೂರ್ತಿ ಆಗಮನ
ಐಐಐಟಿಗೆ ಆಗಮಿಸಿದ ಪ್ರಧಾನಿ ಮೋದಿ
ಮೆಟ್ರೋದಲ್ಲಿ ಮೋದಿ ಅಕ್ಕ-ಪಕ್ಕ ಕುಳಿತು ಸಿದ್ದರಾಮಯ್ಯ, ಡಿಕೆಶಿ ಪ್ರಯಾಣ.
ಮೆಟ್ರೋದಲ್ಲಿ ಪ್ರಯಾಣಿಸುತ್ತ ಮಕ್ಕಳ ಜೊತೆ ಮೋದಿ ಸಂವಾದ
ಮೋದಿಗೆ ಡಿಕೆಶಿಯಿಂದ ಮೆಟ್ರೋ ವಿವರಣೆ
12:55 ಕ್ಕೆ ಐಐಐಟಿಗೆ ಆಗಮಿಸಲಿರುವ ಮೋದಿ
ಬಹುನಿರೀಕ್ಷಿತ ಯೆಲ್ಲೋ ಮೆಟ್ರೋ ಮಾರ್ಗ ಉದ್ಘಾಟಿಸಿದ ಮೋದಿ
ಮಳೆಯನ್ನೂ ಲೆಕ್ಕಿಸದೇ ಮೋದಿಗಾಗಿ ಕಾದು ನಿಂತ ಜನ.
ರಾಗಿಗುಡ್ಡ ಬಳಿ ಮೋದಿಗೆ ಪುಷ್ಪವೃಷ್ಟಿ
ರಾಗಿಗುಡ್ಡ ಮೆಟ್ರೋ ನಿಲ್ದಾಣಕ್ಕೆ ಮೋದಿ ಆಗಮನ
ಬೆಂಗಳೂರಲ್ಲಿ ಮೋದಿಗೆ ಜನರ ಜೈಕಾರ
3 ವಂದೇ ಭಾರತ್ ರೈಲುಗಳಿಗೆ ಮೋದಿ ಚಾಲನೆ
ಕೆಎಸ್ಆರ್ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ
* ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲು
* ನಾಗಪುರ-ಪುಣೆ ವಂದೇ ಭಾರತ್ ರೈಲು
* ಅಮೃತಸರ-ಶ್ರೀಮಾತಾ ವೈಷ್ಣೋದೇವಿ ಕತ್ರಾ ವಂದೇ ಭಾರತ್ ರೈಲು
ಮೋದಿ ಸ್ವಾಗತಿಸಿದ ಸಿಎಂ ಸಿದ್ದರಾಮಯ್ಯ
ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಉಪಸ್ಥಿತಿ.
ಉದ್ಘಾಟನೆಗೆ ಕಾದು ನಿಂತಿರುವ ವಂದೇ ಭಾರತ್ ರೈಲು
ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣಕ್ಕೆ ಬಂದಿಳಿಯಲಿರುವ ಮೋದಿ
ಕೋನಪ್ಪನ ಅಗ್ರಹಾರ ಮೆಟ್ರೋ ಬಳಿ ಜಮಾಯಿಸಿದ ಜನ
ಫ್ಲೈಓವರ್ ಸಮೀಪ ಜಮಾಯಿಸಿದ ಜನ
ಮಳೆಯ ನಡುವೆಯೂ ಮೋದಿ ನೋಡಲು ಕಾಯುತ್ತಿರುವ ಕಾರ್ಯಕರ್ತರು
ಸಂಗೊಳ್ಳಿ ರಾಯಣ್ಣ ಜಂಕ್ಷನ್ನಿಂದ ರೈಲ್ವೆ ನಿಲ್ದಾಣ ಕಡೆಗೆ ತೆರಳಿದ ನರೇಂದ್ರ ಮೋದಿ
ಸಂಗೊಳ್ಳಿ ರಾಯಣ್ಣ ಜಂಕ್ಷನ್ನತ್ತ ಮೋದಿ ಪ್ರಯಾಣ
ಜನರತ್ತ ಕೈ ಬೀಸಿದ ಮೋದಿ
ಪ್ರಧಾನಿ ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಬಿಜೆಪಿ ಕಾರ್ಯಕರ್ತರ ಜಮಾವಣೆ.
ಮೋದಿಗೆ ಮಾಜಿ ಸಿಎಂ ಯಡಿಯೂರಪ್ಪ ಸ್ವಾಗತ
ಮೇಖ್ರಿ ಸರ್ಕಲ್ನ HQTCಗೆ ಬಂದಿಳಿದ ಮೋದಿ
ಹೆಲಿಕಾಪ್ಟರ್ನಲ್ಲಿ ಆಗಮಿಸಿದ ಮೋದಿಗೆ ಸಿಎಂ ಸಿದ್ದರಾಮಯ್ಯ ಸ್ವಾಗತ
ಬೆಂಗಳೂರಿನ ಹೆಚ್ಎಎಲ್ಗೆ ವಿಶೇಷ ವಿಮಾನದಲ್ಲಿ ಬಂದಿಳಿದ ಮೋದಿ
ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ ನೀಡಲಿದ್ದಾರೆ. ನಂತರ ವಂದೇ ಭಾರತ ಬೆಂಗಳೂರು-ಬೆಳಗಾವಿ ನೂತನ ಪ್ರಯಾಣಿಕ ರೈಲಿಗೆ ಚಾಲನೆ ಕೊಡಲಿದ್ದಾರೆ.