ರಾಜ್ಯದ ಹವಾಮಾನ ವರದಿ 29-07-2025

Public TV
1 Min Read

ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರ ಕೊಂಚ ತಗ್ಗಿದ್ದು, ಇಂದು ರಾಜ್ಯದ ಹಲವೆಡೆ ಮಳೆ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ನಗರ, ಗ್ರಾಮಾಂತರ ಸೇರಿ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಜು.30ರಿಂದ ಯಾವುದೇ ಜಿಲ್ಲೆಗಳಿಗೆ ಮಳೆ ಅಲರ್ಟ್ ಇಲ್ಲ. ಬುಧವಾರದಿಂದ ಮಳೆ ಇಳಿಕೆಯಾಗಲಿದ್ದು, ಮುಂದಿನ ವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮತ್ತೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ
ಬೆಂಗಳೂರು: 27-19
ಮಂಗಳೂರು: 26-24
ಶಿವಮೊಗ್ಗ: 25-21
ಬೆಳಗಾವಿ: 23-21
ಮೈಸೂರು: 27-21

ಮಂಡ್ಯ: 28-21
ಮಡಿಕೇರಿ: 21-19
ರಾಮನಗರ: 28-21
ಹಾಸನ: 24-19
ಚಾಮರಾಜನಗರ: 28-21
ಚಿಕ್ಕಬಳ್ಳಾಪುರ: 28-19

ಕೋಲಾರ: 29-21
ತುಮಕೂರು: 27-20
ಉಡುಪಿ: 27-24
ಕಾರವಾರ: 28-25
ಚಿಕ್ಕಮಗಳೂರು: 21-18
ದಾವಣಗೆರೆ: 27-22

ಹುಬ್ಬಳ್ಳಿ: 26-22
ಚಿತ್ರದುರ್ಗ: 26-22
ಹಾವೇರಿ: 26-22
ಬಳ್ಳಾರಿ: 31-23
ಗದಗ: 28-22
ಕೊಪ್ಪಳ: 29-22

ರಾಯಚೂರು: 31-24
ಯಾದಗಿರಿ: 31-24
ವಿಜಯಪುರ: 29-23
ಬೀದರ್: 29-23
ಕಲಬುರಗಿ: 30-24
ಬಾಗಲಕೋಟೆ: 29-23

Share This Article