ಶ್ರೀ ವಿಶ್ವಾವಸುನಾಮ ಸಂವತ್ಸರ
ಗ್ರೀಷ್ಮ ಋತು, ಆಷಾಢ ಮಾಸ
ಕೃಷ್ಣ ಪಕ್ಷ, ದ್ವಿತೀಯ, ಶನಿವಾರ
ಉತ್ತರಾಷಾಢ ನಕ್ಷತ್ರ / ಶ್ರವಣ ನಕ್ಷತ್ರ
ರಾಹುಕಾಲ: 09:16 ರಿಂದ 10:52
ಗುಳಿಕಕಾಲ: 06:05 ರಿಂದ 07:40
ಯಮಗಂಡಕಾಲ: 02:04 ರಿಂದ 03:40
ಮೇಷ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ ವಾಹನದಿಂದ ತೊಂದರೆ, ಉದ್ಯೋಗ ಸ್ಥಳದಲ್ಲಿ ಅಡೆತಡೆಗಳು, ಮಾನಸಿಕ ಗಾಬರಿ ಆತಂಕ, ಗುಪ್ತ ವಿಷಯಗಳಿಂದ ತೊಂದರೆ.
ವೃಷಭ: ಪತ್ರ ವ್ಯವಹಾರಗಳಲ್ಲಿ ಸಮಸ್ಯೆ, ಬಂಧು ಬಾಂಧವರಿಂದ ನೋವು, ನೆರೆಹೊರೆಯವರೊಂದಿಗೆ ಮನಸ್ತಾಪ, ಪ್ರಯಾಣದಲ್ಲಿ ಆಲಸ್ಯ, ಸ್ವಂತ ವ್ಯವಹಾರದಲ್ಲಿ ತೊಂದರೆಗಳು.
ಮಿಥುನ: ಅನಿರೀಕ್ಷಿತ ಆರ್ಥಿಕ ಸಂಕಷ್ಟ, ಕುಟುಂಬಸ್ಥರೇ ಶತ್ರುಗಳು, ಅನಾರೋಗ್ಯ, ಹಿರಿಯರಿಂದ ಬೈಗುಳ, ಪರಿಹಾರ ಹಾಲಿನ ಅಭಿಷೇಕ ಮಾಡಿ.
ಕಟಕ: ಸ್ವಯಂಕೃತ ಅಪರಾಧದಿಂದ ಅಪಮಾನಗಳು, ವಿಕೃತ ಮನೋಭಿಲಾಷೆಗಳು, ದಾಂಪತ್ಯದಲ್ಲಿ ನಿರಾಸಕ್ತಿ, ವೈವಾಹಿಕ ಜೀವನದ ಚಿಂತೆ, ಗೌರವಕ್ಕೆ ಧಕ್ಕೆಯಾಗುವ ಆತಂಕ.
ಸಿಂಹ: ನಷ್ಟಗಳು ಖರ್ಚುಗಳು, ಅಧಿಕ ಸಾಲದ ಚಿಂತೆ, ತಾಯಿಯಿಂದ ಅಂತರ, ಧೀರ್ಘಕಾಲದ ರೋಗಗಳಿಂದ ಚಿಂತೆಗಳು.
ಕನ್ಯಾ: ಮಿತ್ರರಿಂದ ಅನುಕೂಲ, ಪ್ರೀತಿ ಪ್ರೇಮದಲ್ಲಿ ಮನಸ್ತಾಪ, ಸಂತಾನದ ಚಿಂತೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.
ತುಲಾ: ಮಿತ್ರರೊಂದಿಗೆ ವಾಗ್ವಾದ, ಸೇವಕರಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಹಿರಿಯರೊಂದಿಗೆ ಮನಸ್ತಾಪ.
ವೃಶ್ಚಿಕ: ಪ್ರಯಾಣದಲ್ಲಿ ಅಡತಡೆ ನಿರಾಸಕ್ತಿ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ, ಕೃಷಿಕರಿಗೆ ಅನುಕೂಲ, ಉದ್ಯೋಗ ಬದಲಾವಣೆಯ ಆಲೋಚನೆ.
ಧನಸ್ಸು: ಆರ್ಥಿಕ ಕೌಟುಂಬಿಕ ಚಿಂತೆಗಳು, ಕುಟುಂಬದಿಂದ ಸಹಕಾರ, ತಂದೆಯಿಂದ ಅನುಕೂಲ, ಉಸಿರಾಟದ ಸಮಸ್ಯೆಗಳು.
ಮಕರ: ಪಾಲುದಾರಿಕೆಯಲ್ಲಿ ಅನುಕೂಲದ ಭರವಸೆ, ಸಂಗಾತಿಯೊಂದಿಗೆ ಬೇಸರ, ಮಕ್ಕಳ ಜೀವನದ ಚಿಂತೆ, ಶುಭಕಾರ್ಯದ ಆಲೋಚನೆ.
ಕುಂಭ: ಅನಗತ್ಯ ವಿವಾದಗಳು, ಸೇವಕರಿಂದ ಕೆಲಸಗಾರರಿಂದ ನಷ್ಟ, ಸಾಲದ ಚಿಂತೆಗಳು, ಉದ್ಯೋಗ ಸಮಸ್ಯೆಗಳು, ಭವಿಷ್ಯದ ಯೋಚನೆ.
ಮೀನ: ಮಕ್ಕಳ ಆರೋಗ್ಯ ವ್ಯತ್ಯಾಸ, ಹೆಣ್ಣುಮಕ್ಕಳಿಂದ ಅನುಕೂಲ, ಉದ್ಯೋಗ ಲಾಭ, ಆರ್ಥಿಕ ಚೇತರಿಕೆ.