ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳನ್ನ ಕೊಂದ ಕಿರಾತಕರು ಕೊನೆಗೂ ಅಂದರ್ ಆಗಿದ್ದಾರೆ. ಹುಲಿ ಹತ್ಯೆಯ ಅಸಲಿತ್ತನ್ನ ಖಾಕಿ ಪಡೆ ಬಾಯಿ ಬಿಡಿಸಿದೆ.
ಮಲೆ ಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳನ್ನ ಕೊಂದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗ್ಲೆ ಮೂವರು ಆರೋಪಿಗಳ ಕೈಗೆ ಖಾಕಿ ಕೋಳ ತೊಡಿಸಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ರಾಜ್ಯದಲ್ಲಿ ಆರಿದ್ರಾ ಮಳೆಯಬ್ಬರ – 93 ವರ್ಷಗಳ ಬಳಿಕ ಜೂನ್ನಲ್ಲೇ KRS 123 ಅಡಿ ಭರ್ತಿ
ಹುಲಿ ಹಸುವನ್ನ ಬೇಟೆಯಾಡಿದಕ್ಕೆ ರೊಚ್ಚಿಗೆದ್ದ ಮಾದ ಅಲಿಯಾಸ್ ಮಾದುರಾಜು, ನಾಗರಾಜ್ ಹಾಗೂ ಕೋನಪ್ಪ ಮೂರು ಮಂದಿ ಮೃತ ಹಸುವಿನ ಕಳೆಬರದ ಮೇಲೆ ಮೃತದೇಹದ ಮೇಲೆ ಕ್ರಿಮಿನಾಶಕ ಸಿಂಪಡಿಸಿದ್ರು. ಕ್ರಿಮಿನಾಶಕ ಸೇವಿಸಿದ ಹುಲಿಗಳು ಸಾವನ್ನಪ್ಪಿದ್ವು ಯಾವಾಗ ಹುಲಿಗಳ ಮೃತದೇಹ ಕೊಳೆತು ವಾಸನೆ ಬರಲು ಶುರುವಾಯ್ತೊ ಬೀಟ್ಗೆ ಯಾವಾಗ ಫಾರೆಸ್ಟ್ ವಾಚರ್ಸ್ ಬೀಟ್ಗೆ ಬಂದ್ರೊ ಆಗ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಬೆಳಕಿಗೆ ಬರ್ತಿದ್ದಂತೆ ಎಸ್ಕೇಪ್ ಆಗಿದ್ದ ಕಳಬೇದೊಡ್ಡಿ ಗ್ರಾಮದ ಕೋನಪ್ಪ, ಮಾದರಾಜು ಕೊಪ್ಪಗ್ರಾಮದ ನಾಗರಾಜ್ ರನ್ನ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 8 ವರ್ಷಗಳಿಂದ ವಿತರಿಸದೇ ಇದ್ದ 1 ಲಕ್ಷಕ್ಕೂ ಹೆಚ್ಚು ಸ್ಯಾನಿಟರಿ ಪ್ಯಾಡ್ಗಳಿಗೆ ಬೆಂಕಿ
ಇನ್ನು ಹುಲಿಗಳ ಸಾವಿಗೆ ಪರೋಕ್ಷವಾಗಿ ಅರಣ್ಯಾಧಿಕಾರಿಗಳೇ ಕಾರಣ ಎಂಬುದು ಈಗ ರಿವೀಲ್ ಆಗ್ತಾಯಿದೆ. ಹಸುವನ್ನ ಹುಲಿ ಬೇಟೆಯಾಡಿದ್ದು ಅಂದೇ ರಾತ್ರಿ ಮಾದುರಾಜು ನಾಗರಾಜ್ ಹಾಗೂ ಕೋನಪ್ಪ ಮೂರು ಮಂದಿ ಹೋಗಿ ಮೃತ ಹಸುವಿನ ದೇಹಕ್ಕೆ ವಿಷ ಸಿಂಪಡಿಸಿದ್ದರು. ಅಂದೇ ಫಾರೆಸ್ಟ್ ವಾಚರ್ಸ್ ಗಳೆಲ್ಲ ಮೂರ್ನಾಲ್ಕು ತಿಂಗಳಿನಿಂದ ವೇತನ ಆಗಿಲ್ಲವೆಂದು ಮಲೆ ಮಹದೇಶ್ವರ ವನ್ಯಧಾಮದ ಅರಣ್ಯ ಭವನದಲ್ಲಿ ಪ್ರತಿಭಟನೆ ಮಾಡ್ತಾಯಿದ್ರು. ಒಂದು ವೇಳೆ ಅರಣ್ಯ ಸಿಬ್ಬಂದಿ ವೇತನ ಸರಿಯಾಗಿ ನೀಡಿದ್ರೆ. ವಾಚರ್ಸ್ಗಳು ಪ್ರತಿಭಟನೆ ಮಾಡದೇ ಬೀಟ್ಗೆ ಹೋಗಿದ್ರೆ ಇಂದು 5 ಹುಲಿಗಳು ಬದುಕಿ ಉಳಿತಾಯಿದ್ವು ಎಂಬುದು ಈಗ ಬೆಳಕಿಗೆ ಬಂದಿದೆ.
ಇನ್ನು ಈ ಕುರಿತು ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್ಗೆ ಕೇಳಿದ್ರೆ ಹಾರಿಕೆ ಉತ್ತರ ಕೊಡ್ತಾರೆ. ಆ ತರ ಯಾವುದೇ ಸಮಸ್ಯೆ ಇಲ್ವೆ ಇಲ್ಲ ನಮ್ಮ ಮೇಲೆ ಒತ್ತಡ ಕ್ರಿಯೆಟ್ ಮಾಡೋಕೆ ಕೆಲವರು ಈ ರೀತಿ ಮಾಡ್ತಾ ಇದ್ದಾರೆ ಎಂದು ಪಲಾಯನ ಮಾಡ್ತಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಆರಿದ್ರಾ ಮಳೆಯಬ್ಬರ – 93 ವರ್ಷಗಳ ಬಳಿಕ ಜೂನ್ನಲ್ಲೇ KRS 123 ಅಡಿ ಭರ್ತಿ
ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ
ವಿಷವಿಕ್ಕಿ ಹುಲಿ ಹತ್ಯೆ ಮಾಡಿದ ಆರೋಪಿಗಳು ಜೂನ್ 30ರ ವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತ ಮೂವರು ಆರೋಪಿಗಳು ಕೊಳ್ಳೇಗಾಲ ಪ್ರಧಾನ ಸಿವಿಲ್ ಹಾಗೂ ಜೆಎಂಎಫ್ಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ತಡವಾದ ಕಾರಣ ನ್ಯಾಯಾಧೀಶರಾದ ಎಂ.ಕಾವ್ಯಶ್ರೀ ನಿವಾಸಕ್ಕೆ ಆರೋಪಿಗಳನ್ನು ಕರೆತಂದು ಅರಣ್ಯಾಧಿಕಾರಿಗಳು ಹಾಜರು ಪಡಿಸಿದ್ದಾರೆ. ನ್ಯಾಯಧೀಶರ ಮುಂದೆ ಕರೆತರುವ ಮುನ್ನ ಕೊಳ್ಳೇಗಾಲ ತಾಲೂಕು ಆಸ್ಪತ್ರೆಯಲ್ಲಿ ಅರಣ್ಯ ಸಿಬ್ಬಂದಿ ಮೆಡಿಕಲ್ ಮಾಡಿಸಿದ್ದರು. ಕಸ್ಟಡಿಗೆ ಕೊಡುವಂತೆ ಅರಣ್ಯಾಧಿಕಾರಿಗಳು ಮನವಿ ಮಾಡಿದ್ದರು. ಇದೀಗಾ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು ಜೂನ್ 30 ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಕಸ್ಟಡಿಗೆ ಪಡೆಯಲು ಸೂಚಿಸಲಾಯಿತು.