ಪಬ್ಲಿಕ್ ಟಿವಿ ಸಹಯೋಗದಲ್ಲಿ ವಿದ್ಯಾಪೀಠ ಎಜುಕೇಷನ್ ಫೆಸ್ಟ್ – ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ

Public TV
3 Min Read

ಬೆಂಗಳೂರು: ನಿಮ್ಮ ಹೆಮ್ಮೆಯ ಪಬ್ಲಿಕ್ ಟಿವಿ ಪ್ರಸ್ತುತಪಡಿಸುತ್ತಿರುವ “ವಿದ್ಯಾಪೀಠ” ಎಜುಕೇಶನ್ ಫೆಸ್ಟ್‍ಗೆ ಇಂದು ಚಾಲನೆ ಸಿಕ್ಕಿದ್ದು, ಪೋಷಕರು ಹಾಗೂ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ. ಭವಿಷ್ಯದ ಕನಸು ಹೊತ್ತ ವಿದ್ಯಾರ್ಥಿಗಳು ವಿದ್ಯಾಪೀಠದಲ್ಲಿ ಬಂದು ಪಿಯುಸಿ ನಂತರ ಮುಂದೇನು ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದರು. ನಲವತ್ತಕ್ಕೂ ಹೆಚ್ಚು ಪ್ರತಿಷ್ಠಿತ ಕಾಲೇಜುಗಳು, ವಿವಿಗಳು ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಗೈಡ್ ಮಾಡಿದ್ರು.

ಇದೇ ವೇಳೆ ಮಾತನಾಡಿದ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್‍ಆರ್ ರಂಗನಾಥ್, ನಮ್ಮ ಕಾಲದಲ್ಲಿ ಒಳ್ಳೆಯ ಮಾರ್ಗದಶನ ನೀಡಿರೋ ಇರಲಿಲ್ಲ. ಹಾಗಂತ ನಂಗೆ ಇಂದು ನಾನು ಕಲಿತ ವಿದ್ಯೆ, ಕೋರ್ಸ್ ಕೆಟ್ಟದಾಗಿದೆ ಅಂತಾ ಅರ್ಥವಲ್ಲ. ನನಗೆ ಒಳ್ಳೆಯದೇ ಆಗಿದೆ. ನಿಮಗೆ ಇವತ್ತು ಬೇಕಾದಷ್ಟು ಅವಕಾಶಗಳೂ ಇವೆ. ಮಾರ್ಗದರ್ಶಕರೂ ಇದ್ದಾರೆ. ಮೆಡಿಕಲ್, ಇಂಜಿನಿಯರಿಂಗ್ ಮಾತ್ರವಲ್ಲದೇ 100 ಕ್ಕೂ ಅಧಿಕ ಕೋರ್ಸ್‍ಗಳಿವೆ. ಕಂನ್ಸಿಲಿಂಗ್‍ಗಾಗಿ ಕಾಲೇಜಿನಿಂದ ಹಲವಾರು ಮಂದಿ ಬಂದಿದ್ದಾರೆ. ಅವರ ಜೊತೆ ಮತಾಡಿ ನಿಮ್ಮ ಗೊಂದಲಗಳನ್ನ ಬಗೆಹರಿಸಿಕೊಳ್ಳಿ ಅಂದ್ರು.

ಇದೇ ವೇಳೆ ಮಲ್ಲೇಶ್ವರಂ ಕ್ಷೇತ್ರದ ಶಾಸಕ ಡಾ. ಅಶ್ವತ್ಥ್ ನಾರಾಯಣ್ ಮಾತನಾಡಿ, ನಮ್ಮ ಮಕ್ಕಳು ವಿದ್ಯಾವಂತರಾಗಬೇಕು. ಉತ್ತಮ ನಾಗರಿಕರಾಗಿ ದೇಶ ಕಟ್ಟೋ ಕೆಲಸದಲ್ಲಿ ಮುಂಚೂಣಿಯಲ್ಲಿರಬೇಕು ಅನ್ನೋ ಕನಸು ಎಲ್ಲಾ ತಂದೆ ತಾಯಂದಿರದ್ದಾಗಿದೆ. ಮಕ್ಕಳ ವಿದ್ಯಾಭ್ಯಾಸದ ಕುರಿತಾಗಿ ಇಂದು ಈ ಕಾರ್ಯಕ್ರಮ ಹಮ್ಮಿಕೊಂಡಿದೆ. 21 ನೇ ಈ ಶತಮಾನದಲ್ಲಿ ವಿಶ್ವ ನಡೆಯತ್ತಿರೋದು ಪ್ರತಿಭೆಯ ಆಧಾರದ ಮೇಲೆ. ಇದರ ಜೊತೆಗೆ ಕೌಶಲ್ಯತೆ, ತಿಳುವಳಿಕೆ ಬೆಳೆಸಿಕೊಂದ್ರೆ ಮಾತ್ರ ಉತ್ತಮ ವ್ಯಕ್ತಿಯಾಗಲು ಸಾಧ್ಯ ಎಂದು ಹೇಳಿದ್ರು.

ವಿದ್ಯಾರ್ಥಿಗಳು ಹಾಗೂ ಶಿಕ್ಷಣ ತಜ್ಞರು, ಶಿಕ್ಷಣ ಸಂಸ್ಥೆಗಳು ಇವೆಲ್ಲವೂ ಒಂದೇ ಸೂರಿನಡಿ ಲಭ್ಯವಿರುವ ಕಾರ್ಯಕ್ರಮವೇ ನಿಮ್ಮ ಪಬ್ಲಿಕ್ ಟಿವಿಯ ಹೆಮ್ಮೆಯ ಕಾರ್ಯಕ್ರಮ ವಿದ್ಯಾಪೀಠ. ಪಬ್ಲಿಕ್ ಟಿವಿ ಮೊಟ್ಟ ಮೊದಲ ಬಾರಿಗೆ ಈ ಕಾರ್ಯಕ್ರಮ ಪ್ರಸ್ತುತ ಪಡಿಸುತ್ತಿದೆ. ಪ್ರತಿಷ್ಠಿತ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಭಾಗವಹಿಸುತ್ತಿರೋ ಈ ಫೇಸ್ಟ್ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಲ್ಲೂ ಮಾಹಿತಿಗಳ ಭಂಡಾರವನ್ನೇ ನಿಮ್ಮ ಮುಂದೆ ಹೊತ್ತು ತರಲಿದೆ. ಮಲ್ಲೇಶ್ವರಂ ಆಟದ ಮೈದಾನದಲ್ಲಿ ಇಂದು ಮತ್ತು ನಾಳೆ ಈ ಮೆಗಾ ಎಜುಕೇಶನ್ ಈವೆಂಟ್ ನಡೆಯಲಿದೆ. ಉನ್ನತ ವ್ಯಾಸಂಗದ ಆಸೆ ಹೊತ್ತ ವಿದ್ಯಾರ್ಥಿಗಳಿಗೆ ಒಂದೇ ವೇದಿಕೆಯಲ್ಲಿ ಭವಿಷ್ಯದ ಹಾದಿಯನ್ನು ತೋರಿಸುವ ಕಾರ್ಯಕ್ರಮ ಇದಾಗಿದೆ.

ಕಾರ್ಯಕ್ರಮದ ಪಟ್ಟಿ ಇಂತಿದೆ:
* 40 ಕ್ಕೂ ಹೆಚ್ಚು ಪ್ರತಿಷ್ಠಿತ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಭಾಗಿ.
* 20ಕ್ಕೂ ಹೆಚ್ಚು ಕೋರ್ಸ್‍ಗಳ ಬಗ್ಗೆ ಮಾಹಿತಿ.
* 10 ಮಂದಿ ನುರಿತ ಶಿಕ್ಷಣ ತಜ್ಞರಿಂದ ವಿಚಾರ ಸಂಕಿರಣ.
* ಸಿಇಟಿ, ಕಾಮೆಡ್ ಕೆ, ನೀಟ್ ಇನ್ನಿತರ ವಿಷಯಗಳ ಬಗ್ಗೆ ಮಾರ್ಗದರ್ಶನ.
* ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸನಕ್ಕೂ ಮಾರ್ಗದರ್ಶನ.

ಕಾರ್ಯಕ್ರಮ ನಡೆಯುವ ವಿಳಾಸ: ಸರ್ಕಾರಿ ಪ್ರಾಥಮಿಕ ಮಾದರಿ ಶಾಲೆ ಕ್ರೀಡಾಂಗಣ, ಮಲ್ಲೇಶ್ವರಂ 6ನೇ ಕ್ರಾಸ್, ಕೆಸಿ ಜನರಲ್ ಆಸ್ಪತ್ರೆ ಮತ್ತು ಮಲ್ಲೇಶ್ವರಂ ಪೊಲೀಸ್ ಠಾಣೆ ಎದುರು, ಮಲ್ಲೇಶ್ವರಂ,ಬೆಂಗಳೂರು.

ವೀದ್ಯಾಪೀಠ ಕಾರ್ಯಕ್ರಮಕ್ಕೆ ಪ್ರವೇಶ ಉಚಿತ. ವಿದ್ಯಾರ್ಥಿಗಳು ಮತ್ತು ಪೋಷಕರು ಈ ಕಾರ್ಯಕ್ರಮವನ್ನ ಸದುಪಯೋಗಪಡಿಸಿಕೊಳ್ಳಲ್ಲಿ ಅನ್ನೋದು ಪಬ್ಲಿಕ್ ಟಿವಿಯ ಆಶಯ. ವಿದ್ಯಾಪೀಠಕ್ಕೆ ಬರೋ ವಿದ್ಯಾರ್ಥಿಗಳಿಗೆ ಅಕ್ಷಯ ತೃತೀಯದಂದು ಬಂಪರ್ ಬಹುಮಾನದ ಅವಕಾಶವಿದೆ. ವಿದ್ಯಾಪೀಠದಲ್ಲಿ ಭಾಗವಹಿಸೋ ವಿದ್ಯಾರ್ಥಿಗಳಿಗೆ ಲಕ್ಕಿ ಡಿಪ್ ಇರಲಿದೆ. ಲಕ್ಕಿ ಡಿಪ್ ನಲ್ಲಿ ಆಯ್ಕೆಯಾಗೋ ವಿದ್ಯಾರ್ಥಿಗಳಿಗೆ ಬಂಪರ್ ಬಹುಮಾನ ಸಿಗಲಿದೆ. ಕಾರ್ಯಕ್ರಮಕ್ಕೆ ಆಗಮದ ವೇಳೆ ರಿಜಿಸ್ಟ್ರೇಷನ್ ಬಳಿ ವಿದ್ಯಾರ್ಥಿಗಳು ತಮ್ಮ ಹೆಸರು, ಫೋನ್ ನಂಬರ್ ನಮೂದಿಸಬೇಕು. ಪ್ರತಿ ಗಂಟೆಗೊಮ್ಮೆ ಲಕ್ಕಿಡಿಪ್ ತೆಗದಯಲಿದ್ದು ಆಯ್ಕೆಯಾದವರಿಗೆ ಬಂಪರ್ ಬಹುಮಾನ ಸಿಗಲಿದೆ. ಬನ್ನಿ ಕಾರ್ಯಕ್ರಮ ದಲ್ಲಿ ಭಾಗವಹಿಸಿ. ಮಾಹಿತಿ ಜೊತೆ ಬಹುಮಾನ ಗೆಲ್ಲಿ.

Share This Article
Leave a Comment

Leave a Reply

Your email address will not be published. Required fields are marked *