ತಾಯಿ, ಮಗನ ಕೊಲೆ ಕೇಸ್‌ – ಪೊಲೀಸರಿಗೆ ಹೆದರಿ ಆರೋಪಿ ನೇಣಿಗೆ ಶರಣು

Public TV
1 Min Read

ಬೆಳಗಾವಿ: ಅಥಣಿ (Athani) ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ಕಳೆದ ಭಾನುವಾರ ನಡೆದಿದ್ದ ತಾಯಿ, ಮಗನ ಜೋಡಿ ಕೊಲೆ (Double Murder) ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿ ನೇಣಿಗೆ ಶರಣಾಗಿದ್ದಾನೆ.

ಅಥಣಿ ತಾಲೂಕಿನ ಕೊಡಗಾನೂರ್ ಗ್ರಾಮದಲ್ಲಿ ಏಪ್ರಿಲ್ 13 ರಂದು ಚಂದ್ರವ್ವ ಈಚೇರಿ ಹಾಗೂ ವಿಠ್ಠಲ ಈಚೇರಿ ತಾಯಿ ಮಗನ ಕೊಲೆ ಮಾಡಿ ಆರೋಪಿಗಳು ಕಬ್ಬಿನ ಕದ್ದೆಯಲ್ಲಿ ಶವ ಎಸೆದು ಹೋಗಿದ್ದರು. ಇದನ್ನೂ ಓದಿ: ಮೇ 1 ರಿಂದ ಜಿಪಿಎಸ್ ಆಧಾರಿತ ಟೋಲ್ ಇಲ್ಲ – ಹೆದ್ದಾರಿ ಸಚಿವಾಲಯ ಸ್ಪಷ್ಟನೆ

ಪೊಲೀಸರ (Police) ತನಿಖೆಗೆ ಹೆದರಿ ಶೇಗುನಶಿ ಗ್ರಾಮದ ಸುರೇಶ ರಾಮಪ್ಪ ಸವದತ್ತಿ (36) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಶ್ರೀಶೈಲ್ ಸಂಗಪ್ಪ ಹೊರಟ್ಟಿ (35) ಕೊಲೆ ಆರೋಪಿ ಆತ್ಮಹತ್ಯೆಗೆ ವಿಫಲ ಯತ್ನ ನಡೆಸಿದ್ದಾನೆ. ಇದನ್ನೂ ಓದಿ: ಇನ್ನು ಮುಂದೆ ಪಿಯುಸಿಯಲ್ಲಿ ಕಲೆ, ವಾಣಿಜ್ಯ ಓದಿದವರೂ ಪೈಲಟ್‌ ಆಗಬಹುದು!

ಜೋಡಿ ಕೊಲೆ ಹಿನ್ನೆಲೆ ಶೇಗುಣಶಿ ಮೂಲದ ಇಬ್ಬರು ಆರೋಪಿಗಳ ತನಿಖೆ ಆರಂಭವಾದ ಹಿನ್ನೆಲೆ ಓರ್ವ ಆತ್ಮಹತ್ಯಗೆ ಶರಣಾಗಿದ್ದಾನೆ. ಒಬ್ಬ ಬಚಾವ್ ಆಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Share This Article