ಕಟ್ಟಪ್ಪ ಬಾಹುಬಲಿಯನ್ನ ಕೊಂದಿದ್ದು ಏಕೆ? – ಮಿಲಿಯನ್ ಡಾಲರ್ ಪ್ರಶ್ನೆಗೆ ಸಿಕ್ತು ಉತ್ತರ

Public TV
1 Min Read

ಬೆಂಗಳೂರು: ಬಾಹುಬಲಿ 1 ಸಿನಿಮಾ ನೋಡಿದಾಗಿನಿಂದ ಜನ ಕೇಳುತ್ತಿದ್ದದ್ದು ಒಂದೇ ಪ್ರಶ್ನೆ. ಬಾಹುಬಲಿಯನ್ನ ಕಟ್ಟಪ್ಪ ಕೊಂದಿದ್ಯಾಕೆ ಅಂತ. ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

ಇದನ್ನೂ ಓದಿ:ಬೆಂಗ್ಳೂರಿನಲ್ಲಿ ಬಾಹುಬಲಿ ಚಿತ್ರದ 1 ಟಿಕೆಟ್ ಬೆಲೆ ಕೇಳಿದ್ರೆ ನಿಮ್ಗೆ ಆಶ್ಚರ್ಯ ಆಗುತ್ತೆ!

ಕುಂತಲಾ ಸಾಮ್ರಾಜ್ಯದ ಯುವರಾಣಿ ದೇವಸೇನಳ ಪ್ರೀತಿಯ ಪಾಶದಲ್ಲಿ ಬಾಹುಬಲಿ ಸಿಕ್ಕಿಬಿದ್ದರೆ ಬಲ್ಲಾಳ ವ್ಯಾಮೋಹಿಯಾಗುತ್ತಾನೆ. ಈ ವಿಚಾರ ಅರಿತ ಶಿವಗಾಮಿ ತನ್ನ ಮಗ ಬಾಹುಬಲಿ ತನ್ನ ಮಾತು ಮೀರಲ್ಲ ಅಂತ ತಿಳಿದು ದೇವಸೇನಳ ಪ್ರೀತಿಯಿಂದ ಹೊರಬರುವಂತೆ ಹೇಳುತ್ತಾಳೆ. ಇದಕ್ಕೆ ತನಗೆ ಪಟ್ಟಾಭಿಷೇಕ ಇಲ್ಲದಿದ್ದರೂ ಸರಿಯೇ ದೇವಸೇನಳನ್ನ ಬಿಡೋದಿಲ್ಲ ಎಂಬ ಬಾಹುಬಲಿ ಮಾತಿನಿಂದ ಶಿವಗಾಮಿ ವ್ಯಾಘ್ರಳಾಗುತ್ತಾಳೆ. ಇದ್ರಿಂದ ಕುಪಿತವಾಗಿ ಬಾಹುಬಲಿಗೆ ಬದಲಾಗಿ ಬಲ್ಲಾಳನನ್ನು ಮಾಹಿಷ್ಮತಿಯ ಚಕ್ರಾಧಿಪತಿಯನ್ನಾಗಿ ಮಾಡುತ್ತಾಳೆ.

ಆದ್ರೆ, ತಾನು ಅಪಾರ ನಂಬಿಕೆಯಿಟ್ಟಿದ್ದ ಮಗ ಬಾಹುಬಲಿ ನನ್ನ ಮಾತು ಮೀರಿದನಲ್ಲ ಎಂದು ಸೇಡಿಗೆ ಬೀಳುತ್ತಾಳೆ. ಕೊನೆಗೆ ಬಾಹುಬಲಿ-ಬಲ್ಲಾಳನ ಮಧ್ಯೆ ಆಂತರಿಕ ಯುದ್ಧ ಶುರುವಾದಾಗ ಕಟ್ಟಪ್ಪನ ಮೂಲಕ ಬಾಹುಬಲಿಯನ್ನ ಕೊಲ್ಲಿಸುತ್ತಾಳೆ. ಬಾಹುಬಲಿಯನ್ನ ಬೆನ್ನಿನಿಂದ ಕೊಂದ ಕಟ್ಟಪ್ಪ ಕೊನೆಗೆ ತಾನು ರಾಜಾಜ್ಞೆಯನ್ನ ಶಿರಸಾ ಪಾಲಿಸಿದ್ದಾಗಿ ಕಣ್ಣೀರಿಡುತ್ತಾನೆ.

ಇದನ್ನೂ ಓದಿ: ಟಿಕೆಟ್ ಬುಕ್ಕಿಂಗ್‍ನಲ್ಲೂ ಹೊಸ ದಾಖಲೆ: 24 ಗಂಟೆಯಲ್ಲಿ ಎಷ್ಟು ಬಾಹುಬಲಿ ಟಿಕೆಟ್ ಮಾರಾಟವಾಗಿದೆ ಗೊತ್ತಾ?

Share This Article
Leave a Comment

Leave a Reply

Your email address will not be published. Required fields are marked *