15 ಸರ್ಕಾರಿ ರಜೆಗಳನ್ನ ರದ್ದು ಮಾಡಿದ ಯೋಗಿ ಆದಿತ್ಯನಾಥ್

Public TV
1 Min Read

ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂಪುಟ ಮಂಗಳವಾರದಂದು ಶ್ರೇಷ್ಠ ವ್ಯಕ್ತಿಗಳ ಜಯಂತಿಗಳಿಗೆ ನೀಡಲಾಗ್ತಿದ್ದ 15 ಸರ್ಕಾರಿ ರಜೆಗಳನ್ನ ರದ್ದು ಮಾಡಿದೆ.

ಇವುಗಳಲ್ಲಿ ಬಹುತೇಕ ರಜೆಗಳನ್ನ ಹಿಂದಿನ ಅಖಿಲೇಶ್ ಯಾದವ್ ಸರ್ಕಾರ ಇದ್ದಾಗ ಪರಿಚಯಿಸಲಾಗಿತ್ತು. 42 ಸರ್ಕಾರಿ ರಜೆಗಳಲ್ಲಿ 17 ರಜೆಗಳನ್ನ ಶ್ರೇಷ್ಠ ವ್ಯಕ್ತಿಗಳ ಜಯಂತಿ ಹಾಗೂ ಪುಣ್ಯ ಸ್ಮರಣೆಯ ಅಂಗವಾಗಿ ನೀಡಲಾಗ್ತಿತ್ತು.

ಡಾ. ಬಿಆರ್ ಅಂಬೇಡ್ಕರ್ ಅವರ ಜನ್ಮ ವಾರ್ಷಿಕೋತ್ಸವ ಆಚರಣೆಯ ಸಂದರ್ಭದಲ್ಲಿ ಮಾತನಾಡಿದ್ದ ಯೋಗಿ ಆದಿತ್ಯನಾಥ್, ಶ್ರೇಷ್ಠ ವ್ಯಕ್ತಿಗಳ ಜಯಂತಿಗಳಿಗೆ ಇನ್ಮುಂದೆ ಶಾಲೆಗಳಿಗೆ ರಜೆ ನೀಡುವುದಿಲ್ಲ ಎಂದು ಹೇಳಿದ್ದರು. ಶಾಲೆಗಳಿಗೆ ರಜೆ ನೀಡೋ ಬದಲು ಈ ದಿನಗಳಂದು ಮಕ್ಕಳಿಗೆ 2 ಗಂಟೆಗಳ ಕಾಲ ಅಂತಹ ವ್ಯಕ್ತಿಗಳ ಬಗ್ಗೆ ಪಾಠ ಮಾಡಬೇಕೆಂದು ಯೋಗಿ ಹೇಳಿದ್ದರು.

ಈ ಮೂಲಕ ಉತ್ತರ ಪ್ರದೇಶ ಸರ್ಕಾರ, ಸರ್ಕಾರಿ ರಜೆಗಳ ಪಟ್ಟಿಯನ್ನ ಕಡಿತಗೊಳಿಸಿರುವ ಮೊದಲ ಸರ್ಕಾರ ಎನಿಸಿಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *