ಮಹಾಕುಂಭ ಮೇಳದಲ್ಲಿ ಪ್ರಸಾದ ತಯಾರಿಸಿದ ಅದಾನಿ

Public TV
2 Min Read

– ಅದಾನಿ ಗ್ರೂಪ್‌, ಇಸ್ಕಾನ್‌ ಸಹಯೋಗದಿಂದ ಮಹಾಪ್ರಸಾದ ಸೇವೆ

ನವದೆಹಲಿ: ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ (Gautam Adani) ಮಂಗಳವಾರ ಮಹಾಕುಂಭ ಮೇಳದ ( Maha Kumbh Mela) ಇಸ್ಕಾನ್ ಶಿಬಿರದಲ್ಲಿ ಪ್ರಸಾದ ತಯಾರಿಸಿ ಸೇವೆ ಸಲ್ಲಿಸಿದ್ದಾರೆ

&

nbsp;

ಜನವರಿ 13 ರಿಂದ ಫೆಬ್ರವರಿ 26 ರವರೆಗಿನ ಮಹಾಕುಂಭ ಮೇಳದ ಸಂಪೂರ್ಣ ಅವಧಿಗೆ ಅದಾನಿ ಗ್ರೂಪ್, ಇಸ್ಕಾನ್ ಸಹಯೋಗದೊಂದಿಗೆ ‘ಮಹಾಪ್ರಸಾದ್ ಸೇವಾ’ ಉಪಕ್ರಮದಡಿ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಮಾತಾಡಿದ ಅವರು, ಮಹಾಕುಂಭ ಮೇಳದಿಂದ ನಾನು ತುಂಬಾ ಉತ್ಸುಕನಾಗಿದ್ದೇನೆ. ಕುಂಭ ಭಕ್ತಿ ಮತ್ತು ಸೇವೆಯ ಪವಿತ್ರ ಕೇಂದ್ರವಾಗಿದೆ. ಇಸ್ಕಾನ್ ಸಹಯೋಗದೊಂದಿಗೆ ಭಕ್ತರಿಗಾಗಿ ನಾವು ಮಹಾಪ್ರಸಾದ ಸೇವೆಯನ್ನು ಮಾಡುತ್ತಿರುವುದು ನನ್ನ ಅದೃಷ್ಟ ಎಂದಿದ್ದಾರೆ.

ಮಹಾಪ್ರಸಾದ ಸೇವೆಯು 50 ಲಕ್ಷ ಭಕ್ತರಿಗೆ ಸೇವೆ ಸಲ್ಲಿಸುವ ಗುರಿಯನ್ನು ಹೊಂದಿದೆ. ಎರಡು ದೊಡ್ಡ ಅಡುಗೆಮನೆಗಳಲ್ಲಿ ಊಟವನ್ನು ತಯಾರಿಸಿ ಮೇಳದ ಪ್ರದೇಶದಾದ್ಯಂತ 40 ಸ್ಥಳಗಳಲ್ಲಿ ವಿತರಿಸಲಾಗುತ್ತದೆ. ಪ್ರತಿದಿನ 1 ಲಕ್ಷ ಭಕ್ತರಿಗೆ ಆಹಾರವನ್ನು ನೀಡುವ ನಿರೀಕ್ಷೆಯಿದೆ. ಇನ್ನೂ ಈ ಸೇವೆಯು 2,500 ಸ್ವಯಂಸೇವಕರು, ಅಂಗವಿಕಲ ಭಕ್ತರು ಮತ್ತು ಮಕ್ಕಳಿರುವ ತಾಯಂದಿರಿಗೆ ಗಾಲ್ಫ್ ಕಾರ್ಟ್‌ಗಳು ಮತ್ತು ಗೀತಾ ಸಾರ್‌ನ ಐದು ಲಕ್ಷ ಪ್ರತಿಗಳ ವಿತರಣೆಯನ್ನು ಒಳಗೊಂಡಿದೆ.

ಈ ಉಪಕ್ರಮದ ಕುರಿತು ಚರ್ಚಿಸಲು ಅದಾನಿ ಇಸ್ಕಾನ್ ಆಡಳಿತ ಮಂಡಳಿ ಆಯೋಗದ ಅಧ್ಯಕ್ಷ ಗುರು ಪ್ರಸಾದ್ ಸ್ವಾಮಿ ಅವರನ್ನು ಭೇಟಿಯಾದರು.

ಇಸ್ಕಾನ್ ಪಾಲುದಾರಿಕೆಗೆ ಧನ್ಯವಾದ ಹೇಳಿದ ಅದಾನಿ, ʻಮಾ ಅನ್ನಪೂರ್ಣೆಯ ಆಶೀರ್ವಾದದೊಂದಿಗೆ, ಲಕ್ಷಾಂತರ ಭಕ್ತರಿಗೆ ಉಚಿತ ಆಹಾರವನ್ನು ಒದಗಿಸಲಾಗುವುದು. ಸೇವೆಯು ದೇಶಭಕ್ತಿ, ಧ್ಯಾನ ಮತ್ತು ಪ್ರಾರ್ಥನೆಯ ಅತ್ಯುನ್ನತ ರೂಪವಾಗಿದೆ. ನಿಜವಾದ ಅರ್ಥದಲ್ಲಿ, ಸೇವೆಯೇ ದೇವರುʼ ಎಂದಿದ್ದಾರೆ.

Share This Article