ದಾವಣಗೆರೆ: ಬಿಸಿಲ ಬೇಗೆಗೆ ಸಾವನ್ನಪ್ಪುತ್ತಿರುವ ಮೀನುಗಳು- ಆತಂಕದಲ್ಲಿ ಮೀನುಗಾರರು

Public TV
0 Min Read

ದಾವಣಗೆರೆ: ಬಿಸಿಲ ಬೇಗೆಗೆ ಕೆರೆಯಲ್ಲಿನ ಮೀನುಗಳು ಸಾವನ್ನಪ್ಪುತ್ತಿರುವ ಘಟನೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ದೇವರಬೆಳಕೆರೆ ಗ್ರಾಮದಲ್ಲಿ ನಡೆದಿದೆ.

ಕಳೆದ ಕೆಲ ದಿನಗಳಿಂದ ಬಿಸಿಲು ಹೆಚ್ಚಾಗಿದ್ದು ಬಿನಿಲಿನ ಶಾಖಕ್ಕೆ ದೇವರಬೆಳಕೆರೆ ಗ್ರಾಮದ ಕೆರೆಯ ನೀರಿನಲ್ಲಿದ್ದ ಮೀನುಗಳು ಪ್ರತಿನಿತ್ಯ ಸಾವನ್ನಪ್ಪಿ ದಡ ಸೇರುತ್ತಿವೆ. ಹರಿಹರ ತಾಲೂಕಿನ ದೊಡ್ಡ ಕೆರೆಯೆಂದು ಖ್ಯಾತಿ ಪಡೆದಿದ್ದ ಕೆರೆಯಲ್ಲಿ ಈ ವರ್ಷ ನೀರು ಕಡಿಮೆಯಾಗಿದ್ದು ಮೀನುಗಾರರಲ್ಲಿ ಆತಂಕ ಮೂಡಿದೆ.

ಮೀನುಗಾರಿಕೆಯನ್ನೇ ನಂಬಿದ್ದ ಜನರಿಗೆ ಮೀನುಗಳು ಸಾವನ್ನಪ್ಪುತ್ತಿರುವುದರಿಂದ ಆತಂಕ ಮನೆ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *